ಇಡೀ ಜಗತ್ತೇ ಈಗ ನಮ್ಮ ಮಾತು ಕೇಳುತ್ತೆ : ರಾಜನಾಥ್ ಸಿಂಗ್

Social Share

ಬಲದೇವ್, ಫೆ.5- ಗಡಿಭಾಗದ ಗಾಲ್ವಾನದಲ್ಲಿ ನಡೆದ ಘರ್ಷಣೆಯಲ್ಲಿ ಚೀನಾದ 38ರಿಂದ 50 ಸೈನಿಕರು ಸತ್ತಿದ್ದಾರೆ. ಕೇವಲ ಇಬ್ಬರು ಮೂವರಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿರುಗೇಟು ನೀಡಿದ್ದಾರೆ.
ಉತ್ತರ ಪ್ರದೇಶದ ಬಲದೇವ್, ಖೇರಘರ್ ಹಾಗೂ ಅಗ್ರಾ ಗ್ರಾಮೀಣ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಬಹಿರಂಗ ಸಮಾವೇಶ ಉದ್ದೇಶಿಸಿ ನಡೆಸಿದ ಪ್ರಚಾರ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಾಲ್ವಾನದ ಘರ್ಷಣೆಯಲ್ಲಿ ಮೂರು ಮಂದಿ ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತೇನೆ. ಸಂಘರ್ಷದಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಆಸ್ಟ್ರೇಲಿಯಾ ಮೂಲದ ಪತ್ರಿಕೆ ಈ ಕುರಿತು ವರದಿ ಮಾಡಿದೆ. ನಮ್ಮ ಗಡಿ ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ. ಈ ಮೊದಲು ಜಗತ್ತು ನಮ್ಮ ಮಾತನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ.
ಆದರೆ ಈಗ ನಾವು ದುರ್ಬಲರಲ್ಲ. ನಾವು ಏನಾದರೂ ಹೇಳಿದರೆ ಇಡೀ ಜಗತ್ತೆ ಅದನ್ನು ಆಲಿಸುತ್ತದೆ. ನಮ್ಮ ಸೇನೆ ಬಲಿಷ್ಠವಾಗಿದೆ. ಉರಿ ಮತ್ತು ಪುಲ್ವಾಮ ದಾಳಿಗಳ ಬಳಿಕ ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದನೆಯನ್ನು ನಮ್ಮ ಸೈನಿಕರು ಹತ್ತಿಕ್ಕಿದ್ದಾರೆ. ಭಯೋತ್ಪಾದನೆ ವಿರುದ್ಧ ಬಲವಾದ ಸಂದೇಶವನ್ನು ರವಾನೆ ಮಾಡಿದ್ದೇವೆ ಎಂದು ಹೇಳಿದರು.

Articles You Might Like

Share This Article