ಬಂಡುಕೋರರ ಸುಳಿವು ನೀಡಿದರೆ 4 ರಿಂದ 8 ಲಕ್ಷ ಬಹುಮಾನ

Social Share

ನವದೆಹಲಿ,ಜ.6- ಕಳೆದ ನವೆಂಬರ್‍ನಲ್ಲಿ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ಕರ್ನಲ್ ಮತ್ತು ಅವರ ಕುಟುಂಬವನ್ನು ಹತ್ಯೆ ಮಾಡಿದ ಬಂಡುಕೋರರ ಬಗ್ಗೆ ಪ್ರಮುಖ ಸುಳಿವು ಅಥವಾ ಮಾಹಿತಿ ನೀಡುವವರಿಗೆ 4 ರಿಂದ 8 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐವಿ) ಘೋಷಿಸಿದೆ.
2021ರ ನವೆಂಬರ್ 13ರಂದು ನಡೆದಿದ್ದ ಈ ದಾಳಿಯಲ್ಲಿ ಪಾಲ್ಗೊಂಡಿದ್ದರೆನ್ನಲಾದ ಹತ್ತು ಬಂಡುಕೋರರು ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಮತ್ತು ಮಣಿಪುರ ನಾಗಾ ಪೀಪಲ್ಸ್ ಫ್ರಂಟ್(ಎಂಎನ್‍ಪಿಎಫ್)ಗೆ ಸೇರಿದವರಾಗಿದ್ದಾರೆ.
ಘಟನೆಗೆ ಸಂಬಂಸಿದಂತೆ ಸ್ವಯಂ ಘೋಷಿತ ಲೆಫ್ಟಿನೆಂಟ್ ಕರ್ನಲ್ ಚಾವೋಯಾಯಿ ಮತ್ತು ಲೆಫ್ಟಿನಂಟ್ ಕರ್ನಲ್ ಸಾಗೋಲ್ಸೆಂ ಇನಾವೊಚ ಬೇಕಾಗಿದ್ದಾರೆ ಎಂದು ಎನ್‍ಐಎ ತಿಳಿಸಿದೆ.

Articles You Might Like

Share This Article