ಬೆಂಗಳೂರು, ಮಾ.9- ರಾಜ್ಯದಲ್ಲಿರುವ ಬೀಳು ಜಮೀನು ಪ್ರಕರಣಗಳಲ್ಲಿ ಆರ್ ಟಿ ಸಿ ಯನ್ನು ತಿದ್ದುಪಡಿ ಮಾಡಲು ಮತ್ತೊಮ್ಮೆ ಅವಕಾಶ ನೀಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ವಿಧಾನ ಪರಿಷತ್ ನ ಪ್ರಶ್ನೋತ್ತರದಲ್ಲಿ ಜೆಡಿಎಸ್ ನ ಶ್ರೀಕಂಠೇಗೌಡರು
ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯದಲ್ಲಿ 1,08,09,018 ಎಕರೆ ಕಂದಾಯ ಬೀಳು ಜಮೀನುಗಳಿವೆ.
1966ರ ಕರ್ನಾಟಕ ಭೂ ಕಂದಾಯ ನಿಯಮ 119ದ ಪ್ರಕಾರ ಮೂರು ವರ್ಷದ ಕಂದಾಯ ಪಾವತಿ ಮಾಡದಿದ್ದರೆ ಅದನ್ನು ಬೀಳು ಭೂಮಿ ಎಂದು ಪಹಣಿಯಲ್ಲಿ ನಮೂದಿಸಲಾಗುತ್ತದೆ. ಅದನ್ನು ಬದಲಾವಣೆ ಮಾಡಲು 2014ರ ಸೆಪ್ಟಂರ್ಬ 6 ರವರೆಗೆ ಅವಕಾಶ ನೀಡಲಾಗಿತ್ತು. ಈಗಾಗಲೇ ಅವಧಿ ಮುಗಿದಿದೆ. ಮತ್ತೊಮ್ಮೆ ಅವಕಾಶ ನೀಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅವಕಾಶ ನೀಡಲಾಗುವುದು ಎಂದರು.
ರೈತರ ಬಾಕಿ ಮೊಬಲಗನ್ನು ಪಾವತಿಸಿದರೆ ಪಹಣಿಯಲ್ಲಿ ತಿದ್ದುಪಡಿ ಮಾಡಿಕೊಡಲಾಗುವುದು ಎಂದರು. ಆಗ ಶ್ರೀಕಂಠೇಗೌಡರು, ಗ್ರಾಮ ಲೆಕ್ಕಿಗರು ದ್ವೇಷದಿಂದ ಅನಗತ್ಯವಾಗಿ ಬೀಳು ಜಮೀನು ಎಂದು ನಮೂದಿಸಿ ರೈತರಿಗೆ ಕಿರುಕೂಳ ನೀಡುತ್ತಿದ್ದಾರೆ. ಅದನ್ನು ತೆಗೆಸದಿದ್ದರೆ ಭೂಮಿ ಪರಭಾರೆ ಮಾಡಲಾಗಲ್ಲ, ಸಾಲ ಪಡೆಯಲಾಗಲ್ಲ. ರಾಜ್ಯದಲ್ಲಿ ಶೇ.40ರಷ್ಟು ಜಮೀನನ್ನು ಬೀಳು ಭೂಮಿ ಎಂದು ನಮೂದಿಸಲಾಗಿದೆ ಎಂದು ಹೇಳಿದರು.
ಇದಕ್ಕಾಗಿ ವಿಶೇಷ ಅದಲಾತ್ ಮಾಡಿ ಪಹಣಿ ತಿದ್ದುಪಡಿ ಮಾಡಿಕೊಡಿ ಎಂದು ಸಲಹೆ ನೀಡಿದಾಗ ಸಚಿವರು ಅನ್ನು ಪರಿಗಣಿಸುವುದಾಗಿ ಭರವಸೆ ನೀಡಿದರು. ಮರಿತಿಬ್ಬೆಗೌಡ ಪರವಾಗಿ ಮತ್ತೊಂದು ಪ್ರಶ್ನೆ ಕೇಳಿದ ಶ್ರೀಕಂಠೇಗೌಡರು, ಹಕ್ಕು ದಾಖಲೆ ಶಾಖೆಯಲ್ಲಿ ಕಾಲಂ 3 ಮತ್ತು 9 ಹೊಂದಾಣಿಕೆಯಾಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಅಶೋಕï, ರಾಜ್ಯದಲ್ಲಿ 2022ರ ಮಾರ್ಚ್ 5ರ ವರದಿಯಂತೆ ರಾಜ್ಯದಲ್ಲಿ ತಾಳೆಯಾಗದ 94673 ಪ್ರಕರಣಗಳು ಬಾಕಿ ಇವೆ. ರ್ಆ ರ್ಆ ಟಿ ವಿಭಾಗದ ವಿಳಂಬದಿಂದ ರೈತರಿಗೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದಕ್ಕೂ ವಿಶೇಷ ಅದಾಲತ್ ಮಾಡಲಾಗುವುದು ಎಂದು ಭರವಸೆ ನೀಡಿದರು.
