ಉ.ಪ್ರ, ಫೆ.19 – ಸರಣಿ ಅಪಘಾತ ಸಂಭವಿಸಿ ಶಾಲಾ ಮಕ್ಕಳು ಸೇರಿದಂತೆ ಹಲವಾರು ಜನ ಗಾಯಗೊಂಡಿರುವ ಘಟನೆ ದೆಹಲಿ-ಶಹರಣ್ಪುರ ಹೆದ್ದಾರಿಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಉತ್ತರ ಪ್ರದೇಶದ ಭಾಗ್ಪತ್ ಬಳಿ ಮೋಟಾರ್ ಸೈಕಲ್, ಕಾರ್ ಮತ್ತು ಶಾಲಾ ಬಸ್ಗಳು ಸಾಲಗಿ ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ರಸ್ತೆಯ ತುಂಬಾ ಮಂಜು ಕವಿದಿದ್ದರಿಂದ ವಾಹನ ಸವಾರಿಗೆ ಮುಂದಿನ ವಾಹನಗಳು ಕಾಣುತ್ತಿರಲಿಲ್ಲ. ಹೀಗಾಗಿ ಅಪಘಾತ ಸಂಭವಿಸಿದೆ.
ಕೋಟಿ ಕೋಟಿ ತೆರಿಗೆ ವಂಚನೆ : ಮಂತ್ರಿ ಮಾಲ್ ಚರಾಸ್ತಿ ಸೀಜ್ ಮಾಡಿದ ಬಿಬಿಎಂಪಿ
ಅಪಘಾತದಲ್ಲಿ ಗಾಯಗೊಂಡವರನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ.
#Several, #injured, #multivehicle, #DelhiSaharanpur, #highway,