ನವದೆಹಲಿ,ಫೆ.6- ಮುಷರಫ್ ಅವರನ್ನು ಹೊಗಳಿದ್ದಕ್ಕೆ ತಮ್ಮ ವಿರುದ್ಧ ತಿರುಗಿಬಿದ್ದಿದ್ದ ಬಿಜೆಪಿ ಮುಖಂಡರಿಗೆ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ತಕ್ಕ ತಿರುಗೇಟು ನೀಡಿದ್ದಾರೆ.
ಹಿಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಮುಷರಫ್ ಅವರೊಂದಿಗೆ ಕದನ ವಿರಾಮ ಏಕೆ ಘೋಷಿಸಿಕೊಂಡಿದ್ದರು ಎಂದು ಪ್ರಶ್ನಿಸಿರುವ ಶಶಿ ತರೂರ್ ಅವರು 2004 ರ ವಾಜಪೇಯಿ-ಮುಷರಫ್ ಜಂಟಿ ಹೇಳಿಕೆಗೆ ಸಹಿ ಹಾಕಬೇಕಿತ್ತು ಎಂದು ಟ್ವಿಟ್ ಮಾಡಿ ತಿರುಗೇಟು ನೀಡಿದ್ದಾರೆ.
ಯಾರೇ ಆಗಿರಲಿ ಅವರ ಮರಣ ನಂತರ ಅವರನ್ನು ಟೀಕಿಸುವ ಬದಲು ಅವರ ಬಗ್ಗೆ ಕರುಣೆಯಿಂದ ಮಾತನಾಡುವಂತಹ ದೇಶದಲ್ಲಿ ಬೆಳೆದವನು ನಾನು ಬಿಜೆಪಿ ನಾಯಕರ ಆಕ್ಷೇಪಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ಯಡಿಯೂರಪ್ಪನವರನ್ನ ಬಿಜೆಪಿ ಹೈಕಮಾಂಡ್ ಪಂಕ್ಚರ್ ಮಾಡಿದೆ : ಸಿದ್ದರಾಮಯ್ಯ
ಮುಷರಫ್ ನಿಷ್ಕಪಟ ಶತ್ರು ಮತ್ತು ಕಾರ್ಗಿಲ್ಗೆ ಜವಾಬ್ದಾರರಾಗಿದ್ದರು ಆದರೆ ಅವರು ತಮ್ಮ ಸ್ವಂತ ಹಿತಾಸಕ್ತಿಯಲ್ಲಿ, 2002-07 ರಲ್ಲಿ ಭಾರತದೊಂದಿಗೆ ಶಾಂತಿಗಾಗಿ ಕೆಲಸ ಮಾಡಿದರು. ನಾವು ಸ್ನೇಹಿತರಾಗಿರಲಿಲ್ಲ ಆದರೆ ಅವರು ಶಾಂತಿಯಿಂದ ಕಾರ್ಯತಂತ್ರದ ಲಾಭವನ್ನು ಕಂಡರು, ಎಂದು ತರೂರ್ ಹೇಳಿದರು.
ನಾನು ಮುಷರಫ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರ ಕಾರ್ಯತಂತ್ರದ ಚಿಂತನೆಯಲ್ಲಿ ತೊಡಗಿಸಿಕೊಳ್ಳುವ ರೀತಿ ಮತ್ತು ಸ್ಪಷ್ಟತೆಯನ್ನು ಕಂಡುಕೊಂಡಿದ್ದೇನೆ ಎಂದು ಮಾಜಿ ವಿದೇಶಾಂಗ ಸಚಿವರು ಆಗಿದ್ದ ತರೂರ್ ತಿಳಿಸಿದ್ದಾರೆ.
Shashi Tharoor, Post, Amid, Backlash, Tweet, Pervez Musharraf,