ಬೆಂಗಳೂರು,ಜೂ.18-ಅಪಾರ್ಟ್ಮೆಂಟ್ವೊಂದರ ಮಳೆ ನೀರು ಕೊಯ್ಲು ಇಂಗು ಗುಂಡಿಯಲ್ಲಿ ಅಸ್ತಿಪಂಜರವೊಂದು ಪತ್ತೆಯಾಗಿದೆ.ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಿಲೇಔಟ್ನ ಎಂ.ಎನ್ ಕ್ರೆಡೆನ್ಸ್ ಫ್ಲೋರಾ ಅಪಾರ್ಟ್ಮೆಂಟ್ ಬಳಿ ಮಳೆ ನೀರು ಕೊಯ್ಲುಗಾಗಿ ಗುಂಡಿ ತೆರೆಯಲಾಗಿದೆ.
2012 ರಿಂದ ಈ ಗುಂಡಿಯನ್ನು ಸ್ವಚ್ಚ ಮಾಡಿರಲಿಲ್ಲ. ಮೊನ್ನೆ ಈ ಗುಂಡಿಯನ್ನು ಸ್ವಚ್ಚ ಮಾಡುತ್ತಿದ್ದಾಗ ಅಸ್ತಿಪಂಜರವೊಂದು ಪತ್ತೆಯಾಗಿದೆ.ಅಸ್ತಿಪಂಜರದಲ್ಲಿ ಪ್ಯಾಂಟ್ ಇರುವುದರಿಂದ ಗಂಡಸಿನ ಅಸ್ತಿಪಂಜರ ಇರಬಹುದೆಂದು ಶಂಕಿಸಲಾಗಿದ್ದು ಆಸ್ಪತ್ರೆ ಶವಗಾರಕ್ಕೆ ರವಾನಿಸಲಾಗಿದೆ.
ಬೇಗೂರು ಠಾಣೆ ಪೊಲೀಸರು ಯುಡಿಆರ್ ದಾಖಲಿಸಿಕೊಂಡು ಈ ಅಸ್ತಿಪಂಜರ ಯಾರದ್ದು ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.ಈ ಅಸ್ತಿಪಂಜರ ಈ ಸ್ಥಳದಲ್ಲಿ ಹೇಗೆ ಬಂತು,ಯಾರಾದರೂ ವ್ಯಕ್ತಿಯನ್ನು ಕೊಲೆ ಮಾಡಿ ಇಲ್ಲಿ ತಂದು ಬಿಸಾಡಿರಬಹುದೇ ಅಥವಾ ಕುಡಿದ ಮತ್ತಿನಲ್ಲಿ ಈ ಗುಂಡಿಗೆ ಬಿದ್ದು ಮೃತಪಟ್ಟಿರಬಹುದೇ ಎಂಬಿತ್ಯಾದಿ ಆಯಾಮಗಳಲ್ಲಿ ಪೊಲೀಸರು ತನಿಖೆಕೈಗೊಂಡಿದ್ದಾರೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-07-2025)
- ಸಿದ್ದರಾಮಯ್ಯನವರೇ ಸಿಎಂ ಆಗಿ ಸಿದ್ದು ಮುಂದುವರೆಯುತ್ತಾರೆ : ಪುತ್ರ ಯತೀಂದ್ರ
- ಪಾಲಿಕೆಗಳ ನೌಕರರ ಕಷ್ಟಗಳನ್ನೂ ಕೇಳಿಸಿಕೊಳ್ಳಿ : ರಾಜ್ಯ ಸರ್ಕಾರಕ್ಕೆ HDK ಆಗ್ರಹ
- ಬೆಂಗಳೂರಿನ ಬೀದಿ ನಾಯಿಗಳಿಗೆ ನಿತ್ಯ ಬಾಡೂಟದ ಭಾಗ್ಯ
- ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೊಬೈಲ್ ಕಳವು ಮಾಡುತ್ತಿದ್ದ ಚೋರನ ಬಂಧನ