ಬೆಂಗಳೂರು, ಫೆ.20- ಮುಂದಿನ ವಿಧಾನಸಭೆ ಚುನಾವಣೆಯಲ್ಲಿನ ಸೋಲು- ಗೆಲುವಿನ ವಿಚಾರದ ಆಲೋಚನೆಯಲ್ಲಿ ಸದನಕ್ಕೆ ಬಾರದೇ ಇರುವುದು ತಪ್ಪು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿಂದು ತಿಳಿಸಿದರು.
ನಿಗದಿತ ಅವಧಿಗಿಂತ ವಿಳಂಬವಾಗಿ ಸದನ ಸಮಾವೇಶಗೊಂಡಾಗ ಮಾತನಾಡಿದ ಅವರು, ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಭಾಷಣದ ಮೇಲೆ 15 ಸದಸ್ಯರು ಮಾತನಾಡಿದ್ದಾರೆ. ಒಟ್ಟು ಹದಿಮೂರುವರೆ ಗಂಟೆ ಚರ್ಚೆಯಾಗಿದೆ. ಜೆಡಿಎಸ್ನ 7 ಸದಸ್ಯರು, ಆಡಳಿತ ಪಕ್ಷದ ಮೂವರು ಹಾಗೂ ಪ್ರತಿಪಕ್ಷ ಕಾಂಗ್ರೆಸ್ನ ಐವರು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ ಎಂದರು.
ಬಳಿಕ ಸದಸ್ಯರ ಹಾಜರಾತಿ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಭಾಧ್ಯಕ್ಷರು, ಇಂದು ಬೆಳಗ್ಗೆ 10.30 ಗಂಟೆಯಿಂದಲೂ ಕೋರಂ ಗಂಟೆ ಆರಂಭವಾಗಿತ್ತು. ಕೋರಂ ಆಗದ ಕಾರಣ ಕಲಾಪ 55 ನಿಮಿಷ ವಿಳಂವಾಗಿ ಆರಂಭವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತವರಿನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವುದು ಅಸಾಧ್ಯ : ರಮೀಜ್ ರಾಜಾ
ಚುನಾವಣೆಯ ದೃಷ್ಟಿಯಿಂದ ಸಂಸದೀಯ ವ್ಯವಸ್ಥೆಯನ್ನು ಕಡೆಗಣಿಸಬಾರದು. ಎಲ್ಲರಿಗೂ ಚುನಾವಣೆಯಲ್ಲಿ ಒಳ್ಳೆಯದಾಗಲಿ. ಈ ವ್ಯವಸ್ಥೆಯ ಬಗ್ಗೆ ಜನರಿಗೆ ಹೆಚ್ಚು ವಿಶ್ವಾಸ ಮೂಡುವಂತೆ, ವ್ಯವಸ್ಥೆಗೆ ಹೆಚ್ಚು ಶಕ್ತಿ ತುಂಬುವ ರೀತಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸದನಕ್ಕೆ ಆಗಮಿಸಿ ಕಲಾಪದಲ್ಲಿ ಭಾಗಿಯಾಗಬೇಕು. ಇದಕ್ಕಿಂತ ಹೆಚ್ಚು ಹೇಳುವುದಿಲ್ಲ ಎಂದು ಕಳಕಳಿ ವ್ಯಕ್ತಪಡಿಸಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಲು ಆರಂಭಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ವಿರೋಧ ಪಕ್ಷದ ನಾಯಕರು ಇಲ್ಲದಿರುವುದನ್ನು ಗಮನಿಸಿ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಇದ್ದಾರೆ ಸಾಕು ಎಂದರು. ಆಗ ಖಾದರ್ ಅವರು, ವಿರೋಧ ಪಕ್ಷದ ಕಡೆ ಸದಸ್ಯರ ಹಾಜರಾತಿ ಕಡಿಮೆ ಇರುವುದೇನೋ ಸರಿ. ಆಡಳಿತ ಪಕ್ಷದ ಕಡೆಯೂ ಸದಸ್ಯರ ಹಾಜರಾತಿ ಕೊರತರೆ ಎದ್ದು ಕಾಣುತ್ತಿದೆ ಎಂದು ಹೇಳಿದರು.
ಗಂಡ ಮತ್ತುಅತ್ತೆಯನ್ನು ತುಂಡು ತುಂಡಾಗಿ ಕತ್ತರಿಸಿದ ಮಹಿಳೆ
ಮುಖ್ಯಮಂತ್ರಿ ಮಾತು ಮುಂದುವರೆಸಿ, ಖಾದರ್ ಅವರು ನಿಜವಾದ ನಾಯಕರು. ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶೆಂಪೂರ್ನವರು ಬಂಡೆ ಥರ ಸದನದಲ್ಲಿರುತ್ತಾರೆ ಎಂದು ತಿಳಿಸಿ ಉತ್ತರ ನೀಡಲು ಮುಂದಾದರು.
speaker, kageri, session, assembly elections,