ಸುರ್ಜೆವಾಲರನ್ನು ಭೇಟಿಯಾದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸುಧೀರ್ ಮುರೊಳ್ಳಿ

ಬೆಂಗಳೂರು,ಮಾ.11- ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೆತ್ರದ ಟಿಕೆಟ್ ಹಂಚಿಕೆ ಕುರಿತಂತೆ ಮಹತ್ತರ ಬೆಳವಣಿಗೆ ಯಾಗಿದ್ದು, ಉಭಯ ಜಿಲ್ಲೆಗಳ ನಾಯಕರು ಇಂದು ಎಐಸಿಸಿ ಪ್ರದಾನ ಕಾರ್ಯದರ್ಶಿ ಸುರ್ಜೆವಾಲರವರು ಅವರನ್ನು ಭೇಟಿಮಾಡಿ ಕಾಂಗ್ರೆಸ್ ವಕ್ತಾರರಾದ ಸುಧೀರ್ ಮುರೊಳ್ಳಿ ಅವರಿಗೆ ಟಿಕೆಟ್ ಘೋಷಿಸಬೇಕೆಂದು ಮನವಿ ಮಾಡಿದರು. ಶಾಸಕ ಟಿ. ಡಿ ರಾಜೇ ಗೌಡ, ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಸುಮಾರು ಅರ್ಧ ಗಂಟೆ ಕಾಲ ಚರ್ಚಿಸಿದರು.