ಕಿಸಾನ್ ಸನ್ಮಾನ್ ನಿಧಿ ಪಡೆದ ನಕಲಿ ರೈತರಿಂದ ವಸೂಲಿ ಮಾಡುತ್ತಿದೆ ನಾಗಲ್ಯಾಂಡ್ ಸರ್ಕಾರ
ಕೋಹಿಮಾ, ಆ.12- ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ಪಿಎಂ-ಕಿಸಾನ್ ಸನ್ಮಾನ್ ನಿಧಿ ಯೋಜನೆಯಲ್ಲೂ ಅನರ್ಹ ಫಲಾನುಭವಿಗಳು ನುಸುಳಿದ್ದು, ನಾಗಲ್ಯಾಂಡ್ ಸರ್ಕಾರ ತಪ್ಪಿತಸ್ಥರನ್ನು ಗುರುತಿಸಿ ಹಣ ವಸೂಲಿಗೆ ಮುಂದಾಗಿದೆ.ನಾಗಾಲ್ಯಾಂಡ್ ಕೃಷಿ ಇಲಾಖೆ ಗುರುತಿಸಿರುವ ಪ್ರಕಾರ 524 ಅನರ್ಹ ಫಲಾನುಭವಿಗಳಿದ್ದು, ಅವರಿಂದ 45.08 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕಳೆದ ವರ್ಷದ ಜುಲೈನಲ್ಲಿ ಸಂಸತ್ಗೆ ಮಾಹಿತಿ ನೀಡಿದ ಬಳಿಕ, ಅನರ್ಹರನ್ನು ಗುರುತಿಸುವ ಕಾರ್ಯ ಆರಂಭಿಸಲಾಗಿದೆ ಎಂದು ನಾಗಾಲ್ಯಾಂಡ್ನ […]