ರಾಹುಲ್ ವಿವಾದಿತ ಹೇಳಿಕೆ, ಸಂಸತ್‍ನಲ್ಲಿ ಇಂದೂ ನಿಲ್ಲದ ಗದ್ದಲ

ನವದೆಹಲಿ,ಮಾ.16- ರಾಹುಲ್ಗಾಂಯವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷವೇ ಕಲಾಪಕ್ಕೆ ಅಡ್ಡಿ ಪಡಿಸುವ ಮೂಲಕ ನಾಲ್ಕನೆ ದಿನದ ಕಲಾಪವೂ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಈ ನಡುವೆ ಪ್ರತಿಪಕ್ಷ ಅದಾನಿ ಕಂಪೆನಿಯ ಷೇರು ಮೌಲ್ಯ ಹೆಚ್ಚಳ ಅವ್ಯವಹಾರದ ತನಿಖೆಗೆ ಪಟ್ಟು ಹಿಡಿದಿದೆ. ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಗದ್ದಲ ಕೋಲಾಹಲಗಳು ಮುಂದುವರೆದು ಸಭಾಧ್ಯಕ್ಷರು ಕಲಾಪವನ್ನು ಭೋಜನ ವಿರಾಮದವರೆಗೂ ಮುಂದೂಡಿದ್ದಾರೆ. ಇಂದು ಬೆಳಗ್ಗೆ ಲೋಸಭೆ ಸಮಾವೇಶಗೊಳ್ಳು ತ್ತಿದ್ದಂತೆ ಕೆಲವು ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗೆ ಬಂದು ಘೋಷಣೆಗಳನ್ನುಕೂಗಲು ಪ್ರಾರಂಭಿಸಿದರು, ಅದಾನಿ ಕಂಪೆನಿಯ […]