ಪುನೀತ ಪರ್ವ ಕಾರ್ಯಕ್ರಮ ನೋಡುತ್ತಲೇ ಪ್ರಾಣಬಿಟ್ಟ ಅಪ್ಪು ಅಭಿಮಾನಿ

ಬೆಂಗಳೂರು,ಅ.22- ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಾವಿನ ದುಃಖ ತಡೆಯಲಾರದೆ ಅವರ ಅಭಿಮಾನಿಯೊಬ್ಬರು ಹೃದಯಘಾತದಿಂದ ನಿಧನರಾಗಿದ್ದಾರೆ. ನಿನ್ನೆ ಪ್ರಸಾರವಾಗುತ್ತಿದ್ದ ಪುನೀತ ಪರ್ವ ಕಾರ್ಯಕ್ರಮ ನೋಡುತ್ತಿದ್ದಾಗಲೇ ಅಪ್ಪು ಅಭಿಮಾನಿ ಗಿರಿರಾಜ ಎನ್ನುವವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಮಲ್ಲೇಶ್ವರಂನ ಲಿಂಕ್ ರಸ್ತೆಯಲ್ಲಿ ವಾಸಿಸುತ್ತಿದ್ದ ಗಿರಿರಾಜ ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದರು.ಅಪ್ಪು ನಿಧನದ ಸಂದರ್ಭದಲ್ಲೂ ತೀವ್ರವಾಗಿ ಘಾಸಿಗೊಂಡಿದ್ದ ಗಿರಿರಾಜ ಅವರು ನಿನ್ನೆ ಪುನೀತ ಪರ್ವ ಕಾರ್ಯಕ್ರಮ ನೋಡುವಾಗ ಮತ್ತಷ್ಟು ಕಂಗೆಟ್ಟಿದ್ದರು. ಪುನೀತ್ ಪರ್ವ ಕಾರ್ಯಕ್ರಮ ನೋಡುವಾಗ ಎಂಥ ಮನುಷ್ಯ ಸತ್ತೋದ ಎಂದ ಕಣ್ಣೀರಿಡುತ್ತಿದ್ದ […]