ಎಟಿಎಂ ಬಳಿ ಸೆಕ್ಯೂರಿಟಿಯಂತೆ ನಿಂತು ಅಮಾಯಕ ದಂಪತಿಯ 50,000 ದರೋಡೆ..!
ಬೆಂಗಳೂರು,ಫೆ.11- ಸೆಕ್ಯೂರಿಟಿ ಗಾರ್ಡ್ನಂತೆ ವೇಷ ಧರಿಸಿ ಎಟಿಎಂ ಬಳಿ ಬಂದ ವಂಚಕ ಅಮಾಯಕ ದಂಪತಿಯ ಗಮನ ಬೇರೆಡೆ ಸೆಳೆದು 50 ಸಾವಿರ ಹಣದೊಂದಿಗೆ ಪರಾರಿಯಾಗಿರುವ ಘಟನೆ ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಫೆ.2ರಂದು ಚನ್ನಪಟ್ಟಣ ತಾಲ್ಲೂಕಿನ ಕೋಲೂರು ಗ್ರಾಮದ ಮಹದೇವಯ್ಯ ಎಂಬುವರು ಪತ್ನಿ ಜೊತೆ 50 ಸಾವಿರ ಹಣವನ್ನು ಮಗ ಹೇಮಂತ್ ಗೌಡನ ಅಕೌಂಟ್ಗೆ ಹಾಕಲು ಮದ್ದೂರು ಟೌನ್, ಕೆನರಾ ಬ್ಯಾಂಕ್ಗೆ ಬಂದಿದ್ದಾರೆ. ಬ್ಯಾಂಕ್ನಲ್ಲಿ ಜನ ಜಂಗುಳಿ ಇದ್ದ ಕಾರಣ ಸಿಬ್ಬಂದಿ ಎಟಿಎಂನಲ್ಲಿ ಹಣ ಹಾಕುವಂತೆ […]