ಬಿಜೆಪಿ – ಕಾಂಗ್ರೆಸ್ ಮೊಟ್ಟೆ ಕದನ ತಾರಕಕ್ಕೆ
ಬೆಂಗಳೂರು,ಆ.21- ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಎಲ್ಲ ಪಕ್ಷಗಳ ಸಹಕಾರ ಅಗತ್ಯ ಎಂಬ ಮುಖ್ಯಮಂತ್ರಿಯವರ ಮನವಿ ಹೊರತಾಗಿ, ಕೊಡಗಿನಲ್ಲಿ ಮೊಟ್ಟೆ ಸಂಘರ್ಷಕ್ಕೆ ಪ್ರತಿಭಟನೆಗಳು ವಿಪರೀತಕ್ಕೆ ತಲುಪುತ್ತಿವೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಇತ್ತೀಚೆಗೆ ಕೊಡುಗು ಪ್ರವಾಸ ಕೈಗೊಂಡಿದ್ದಾಗ ಬಿಜೆಪಿ ಕಾರ್ಯಕರ್ತರು ವಿರೋಧಿಸಿ ಕಪ್ಪು ಬಾವುಟ ಪ್ರದರ್ಶಿಸಿದರಲ್ಲದೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಸವಾಲಾಗಿ ಪರಿಗಣಿಸಿದ ಕಾಂಗ್ರೆಸ್ ಆ.26ರಂದು ಕೊಡಗಿನಲ್ಲಿ ಮಡಿಕೇರಿ ಚಲೋ ಹಮ್ಮಿಕೊಂಡಿದೆ. ದೇವರಾಜ ಅರಸು ಅವರ ಹುಟ್ಟೂರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಕಲ್ಲಳ್ಳಿಯಿಂದ ಮಡಿಕೇರಿವರೆಗೂ ಪಾದಯಾತ್ರೆ […]