ಸಂಘರ್ಷಕ್ಕಿಳಿಯದಂತೆ ಮರಾಠಿಗರು-ಕನ್ನಡಿಗರಲ್ಲಿ ಅಲೋಕ್ ಕುಮಾರ್ ಮನವಿ

ಬೆಳಗಾವಿ,ಡಿ.24- ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಪರಸ್ಪರ ಕೆಸರೆರಚಾಡದಂತೆ ಮರಾಠಿ ಮತ್ತು ಕನ್ನಡ ನಾಯಕರಿಗೆ ಎಡಿಜಿಪಿ ಅಲೋಕ್ಕುಮಾರ್ ಅವರು ಮನವಿ ಮಾಡಿದರು. ಇಲ್ಲಿನ ಟಿಳಕವಾಡಿ ಠಾಣೆಯಲ್ಲಿ ಸಂಧಾನ ಮತ್ತು ಶಾಂತಿ ಸಭೆ ನಡೆಸಿ ಮಾತನಾಡಿದ ಅವರು, ಕೇಂದ್ರದ ನಿರ್ದೇಶನದಂತೆ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೆ ಪರಸ್ಪರ ಸಂಘರ್ಷ ನಡೆಸಬಾರದು. ಕೆಸರೆರಚಾಟ ಮಾಡದಂತೆ ಮನವಿ ಮಾಡಿದರು. ಸುಪ್ರೀಂಕೋರ್ಟ್ ತೀರ್ಪನ್ನು ನಾವು ಆಲಿಸಿ ಅದರಂತೆ ನಡೆದುಕೊಳ್ಳಬೇಕಾಗಿರುವುದು ಸಾಂವಿಧಾನಿಕ ಧರ್ಮ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಹೆಣಗಾಡುತ್ತಲೇ ಇರುತ್ತದೆ. ಬೆಳಗಾವಿ ನಗರ ಮತ್ತು […]