ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಮೂವರು ಅರೆಸ್ಟ್
ಬೆಂಗಳೂರು,ಫೆ.15- ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆನ್ಲೈನ್ನಲ್ಲಿ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸುತ್ತಿದ್ದ ಒಡಿಶಾ ಮೂಲದ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ರಾಜ್ಯದ ಭುವನೇಶ್ವರ್ ನಿವಾಸಿ ಕಾಳಿ ಪ್ರಸಾದ್ ರಾತ್ ಅಲಿಯಾಸ ಕಾಳಿ(38), ಮಹಾರಾಷ್ಟ್ರ ಮೂಲದ ಅಭಿಜಿತ್ ಅರುಣ ನೆಟಕೆ ಅಲಿಯಾಸ್ ಅಭಿಜಿತ್(34) ಮತ್ತು ಒಡಿಶಾದ ಅಭಿಷೇಕ್ ಮೊಹಾಂತಿ ಅಲಿಯಾಸ್ ಅಭಿಷೇಕ್(21) ಬಂಧಿತರು. ಈ ಮೂವರನ್ನು ಮಹಾರಾಷ್ಟ್ರದ ಪುಣೆ ಮತ್ತು ಒಡಿಶಾದ ಭುವನೇಶ್ವರ್ನಲ್ಲಿ ಪೊಲೀಸರು ಬಂಸಿದ್ದಾರೆ. ಮಾನ್ಯತಾ ಟೆಕ್ಪಾರ್ಕ್ನಲ್ಲಿರುವ […]