ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಸಾವು

ತುಮಕೂರು, ಜ.25- ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸಲು ಟ್ಯಾಂಕ್‍ಗೆ ಇಳಿದ ಕಾರ್ಮಿಕರಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಿಪಟೂರು ನಗರದ ಹಿಂಡಿಸ್ಕೆರೆ ಗೇಟ್ ಬಳಿ ನಡೆದಿದೆ. ಅರಸೀಕೆರೆ ತಾಲೂಕಿನ ಹಾರ್ನಹಳ್ಳಿ ನಿವಾಸಿ ನಾಗರಾಜು (55), ತಮಿಳುನಾಡಿನ ವೇಲೂರು ಮೂಲದ ರವಿ (38) ಮೃತಪಟ್ಟ ದುರ್ದೈವಿಗಳು. ಪ್ರಸನ್ನಕುಮಾರ್ ಎಂಬುವವರಿಗೆ ಸೇರಿದ ಪೆಟ್ರೋಲ್ ಬಂಕ್‍ನ ಟ್ಯಾಂಕ್ ಸ್ವಚ್ಛಗೊಳಿಸಲು ನಾಗರಾಜ್ ಟ್ಯಾಂಕ್ ಒಳಗೆ ಇಳಿದಿದ್ದಾನೆ. ಈ ವೇಳೆ ಆಮ್ಲಜನಕದ ಕೊರತೆ ಉಂಟಾಗಿ ಉಸಿರುಗಟ್ಟಿದ್ದಾನೆ. ಟ್ಯಾಂಕ್‍ನಿಂದ ಮೇಲೆ ಬರಲು ಒದ್ದಾಡುತ್ತಿದ್ದು, ರಕ್ಷಣೆಗಾಗಿ ರವಿಯನ್ನು ಕರೆದಿದ್ದಾನೆ. ಈ […]

ಧೂಳು ಹಿಡಿದಿದ್ದ ಗಾಂಧಿ ಪ್ರತಿಮೆ ಶುಚಿಗೊಳಿಸಿದ ಬಿಹಾರ ಡಿಸಿಎಂ

ನವದೆಹಲಿ,ಅ.2- ಲಂಡನ್‍ನಲ್ಲಿ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಧೂಳು ಹಿಡಿದಿದ್ದ ಗಾಂಧಿ ಪ್ರತಿಮೆಯನ್ನು ತಮ್ಮ ಕರವಸ್ತ್ರದಿಂದ ಶುಚಿಗೊಳಿಸಿರುವ ವಿಡಿಯೋ ಇದೀಗ ಎಲ್ಲೇಡೆ ವೈರಲ್ ಆಗಿದೆ. ಕಳೆದ ತಿಂಗಳು ಲಂಡನ್‍ನಲ್ಲಿರುವ ಬ್ರಿಟಿಷ್ ಸಂಸತ್ತಿಗೆ ಭೇಟಿ ನೀಡಿದ್ದ ತೇಜಸ್ವಿ ಅವರು ಗಾಂಧಿ ಪ್ರತಿಮೆ ಮೇಲೆ ಇದ್ದ ಧೂಳನ್ನು ತಮ್ಮ ಕರವಸ್ತ್ರದಿಂದ ಶುಚಿಗೊಳಿಸುತ್ತಿರುವ ವಿಡಿಯೋ ತುಣಕನ್ನು ಆರ್‍ಜೆಡಿ ಶಾಸಕರೊಬ್ಬರು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರಪಿತನ ಐತಿಹಾಸಿಕ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹೋದಾಗ . ಅದರ ಮೇಲಿದ್ದ ಧೂಳನ್ನು ಕಂಡ ತೇಜಸ್ವಿ […]