ವಿಮಾನಯಾನ ಕ್ಷೇತ್ರದ ಸಾಧನೆ ಅಮೋಘ ; ಮೋದಿ

ನವದೆಹಲಿ,ಫೆ.22- ದೇಶದಲ್ಲಿ ಹೆಚ್ಚುತ್ತಿರುವ ವಿಮಾನ ನಿಲ್ದಾಣಗಳು ಹಾಗೂ ಉತ್ತಮ ಸಂಪರ್ಕದಿಂದಾಗಿ ವಿಮಾನ ಯಾನ ಕ್ಷೇತ್ರವೂ ಜನರ ಹೃದಯಕ್ಕೆ ಹತ್ತಿರವಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ನಂತರದ ದಿನಗಳಲ್ಲಿ ಫೆ.19ಕ್ಕೆ ದೇಶೀಯ ವಿಮಾನ ಸಂಚಾರ ಸುಮಾರು 4.45 ಲಕ್ಷ ಪ್ರಯಾಣಿಕರ ಗರಿಷ್ಠ ಮಟ್ಟ ತಲುಪಿರುವ ಕುರಿತು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಾಡಿರುವ ಟ್ವೀಟ್ ಅನ್ನು ಹಂಚಿಕೊಂಡಿರುವ ಮೋದಿ ಅವರು ತಮ್ಮ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟ್ನಲ್ಲಿ ಅವರು […]
ಗಡಿ ರಕ್ಷಣೆಗೆ ಅನುಕೂಲವಾಗುವ ವಿವಿಧ ಯೋಜನೆಗಳ ಲೋಕಾರ್ಪಣೆ

ನವದೆಹಲಿ,ಜ.3- ಸೂಕ್ಷ್ಮ ಗಡಿ ಪ್ರದೇಶಗಳಲ್ಲಿ ಭಾರತೀಯ ಸೇನಾ ಯೋಧರ ತ್ವರಿತ ಸಂಚಾರಕ್ಕೆ ಅನುಕೂಲವಾಗುವಂತೆ 724 ಕೋಟಿ ರೂ. ವೆಚ್ಚದಲ್ಲಿ ವಿವಿಧ 28 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲಾಯ ಸಿಯೋಮ್ ಸೇತುವೆ ಹಾಗೂ 27 ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಸಯೋಮ್ ನದಿಯ ಮೇಲೆ ನಿರ್ಮಿಸಿರುವ 100 ಮೀಟರ್ ಉದ್ದದ ಉಕ್ಕಿನ ಕಮಾನು ಸೇತುವೆ ನಿರ್ಮಾಣದಿಂದ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ಪ್ರದೇಶಗಳಿಗೆ ಸೈನ್ಯವನ್ನು ನಿಯೋಜಿಸಲು ಇದು ಸಹಕಾರಿಯಾಗಲಿದೆ. ಶತಮಾನದ […]