ಆಲಿಘರ್ನಲ್ಲೂ ಬಿರುಕು ಬಿಟ್ಟ ಮನೆಗಳು

ನವದೆಹಲಿ,ಜ.11-ಉತ್ತರಾಖಂಡದ ಜೋಶಿಮಠದ ಮಾದರಿಯಲ್ಲೇ ಆಲಿಘರ್ನಲ್ಲೂ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅಲಿಘರ್ನ ಕನ್ವರಿಗಂಜ್ನಲ್ಲಿರುವ ಐದು ಮನೆಗಳಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಜೋಶಿಮಠದ ಮಾದರಿಯಲ್ಲೇ ನಮ್ಮ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿವೆ. ಇದರಿಂದ ನಾವು ಭಯಭೀತರಾಗಿದ್ದೇವೆ. ಈ ಕುರಿತಂತೆ ನಾವು ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಭೂಗರ್ಭದಲ್ಲಿ ಆಳವಡಿಸಲಾಗುತ್ತಿರುವ ಪೈಪ್ಲೈನ್ ಸೋರಿಕೆಯಿಂದಾಗಿ ಮನೆಗಳು ಬಿರುಕು ಬೀಳುತ್ತಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಅನುಮಾನ […]
ಧಾರ್ಮಿಕ ಶ್ರದ್ಧಾಕೇಂದ್ರ ಬದ್ರಿನಾಥ್ನ ಜೋಶಿಮಠಕ್ಕೆ ಕಾದಿದೆಯಾ ಅಪಾಯ..?

ಜೋಶಿಮಠ,ಜ.7- ಹಿಂದುಗಳ ಶ್ರದ್ಧಾ ಕೇಂದ್ರವಾಗಿರುವ ಉತ್ತರಾಕಾಂಡ್ನ ಬದ್ರಿನಾಥ, ಹೇಮಕುಂದ್ ಸಾಹಿಬ್ ಮತ್ತು ಅಂತಾರಾಷ್ಟ್ರೀಯ ಯಾತ್ರಾ ಕೇಂದ್ರ ಅವೌಲಿಗೆ ಹೆಬ್ಬಾಗಿಲಿನಂತಿರುವ ಜೋಶಿಮಠ ಪ್ರಕೃತಿ ವಿಕೋಪದ ಅಂಚಿನಲ್ಲಿದೆ. ಶತಮಾನಗಳ ಹಿಂದೆ ಆದಿಗುರು ಶಂಕರಾಚಾರ್ಯರು ನೆಲೆಸಿದ್ದ ಈ ಸ್ಥಳ ಭೂ ಕುಸಿತದಿಂದ ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು ಸಂಪೂರ್ಣ ನಶಿಸಿ ಹೋಗುವ ಆತಂಕದಲ್ಲಿದೆ. ಜೋಶಿಮಠನಲ್ಲಿರುವ ಮನೆಗಳು, ರಸ್ತೆಗಳು, ಮೈದಾನ ಸೇರಿದಂತೆ ಹಲವೆಡೆ ಕ್ರಮೇಣ ಬಿರುಕು ಹೆಚ್ಚಾಗ ತೋಡಗಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿನಿ, ಈ ಪ್ರದೇಶದಲ್ಲಿ ವಾಸವಿರುವ 600ಕ್ಕೂ ಹೆಚ್ಚು […]