ಏಪ್ರಿಲ್ ವೇಳೆಗೆ ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಸೇವೆ ಆರಂಭ

ಬೆಂಗಳೂರು,ಜ.29- ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಮಹತ್ವದ ಯೋಜನೆಯಾದ ಬೆಂಗಳೂರು-ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಸೇವೆ ಮಾರ್ಚ್ ತಿಂಗಳಾಂತ್ಯಕ್ಕೆ ಅಥವಾ ಏಪ್ರಿಲ್ ತಿಂಗಳಲ್ಲಿ ಆರಂಭವಾಗಲಿದೆ. ಬೆಂಗಳೂರು-ಧಾರವಾಡ ವಂದೇ ಭಾರತ್ ರೈಲು ಮಿನಿ ವಂದೇ ಭಾರತ್ ಕಲ್ಪನೆಯಲ್ಲೇ ಇರಲಿದ್ದು, ಇದು 8 ಕೋಚ್‍ಗಳ ರೈಲಾಗಿದೆ. ಅಂದರೆ ಈ ರೈಲಿನಲ್ಲಿ 8 ಬೋಗಿಗಳು ಮಾತ್ರ ಇರಲಿದೆ. ಈ ಎಕ್ಸ್‍ಪ್ರೆಸ್ ರೈಲು ಕೇವಲ 5 ಗಂಟೆಗಳಲ್ಲಿ ಬೆಂಗಳೂರಿನಿಂದ ಧಾರವಾಡ ತಲುಪಬಹುದಾಗಿದೆ. ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದ ಹೈಲೈಟ್ಸ್ […]