ಶ್ರದ್ದಾ ಮಾದರಿಯಲ್ಲಿ ಮತ್ತೆರಡು ಹತ್ಯೆ, ಸಮಾಜವನ್ನು ಬೆಚ್ಚಿಬೀಳಿಸುತ್ತಿರುವ ವಿಕೃತ ಕೊಲೆಗಳು..!

ನವದೆಹಲಿ,ಡಿ.18-ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ದಾ ವಾಲ್ಕರ್ ಭೀಕರ ಹತ್ಯೆಯ ಬಳಿಕ, ಅದೇ ಮಾದರಿಯ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಜಾರ್ಖಂಡ್ನಲ್ಲಿ ವ್ಯಕ್ತಿಯೊಬ್ಬ ತನ್ನ ಸಂಗಾತಿಯನ್ನು ಹತ್ಯೆ ಮಾಡಿ 12 ತುಂಡುಗಳಾಗಿ ಕತ್ತರಿಸಿ ಬಿಸಾಡಿದ್ದು, ಜೈಪುರದಲ್ಲಿ ಮತ್ತೊಬ್ಬ ವ್ಯಕ್ತಿ ತನ್ನ ಅತ್ತೆಯನ್ನೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ 10 ತುಂಡುಗಳಾಗಿ ಕತ್ತರಿಸಿರುವ ವಿಕೃತ ಘಟನೆಗಳು ಬಯಲಾಗಿವೆ. ಜಾರ್ಖಂಡ್ನ ಬೋರಿಯೊ ಪೊಲೀಸ್ ಠಾಣೆ ವ್ಯಾಪ್ತಿಯ ಸಾಹೇಬ್ಗಂಜ್ ಪ್ರದೇಶದಲ್ಲಿ ದಿಲ್ದಾರ್ ಅನ್ಸಾರಿ ಎಂಬಾತ, ತನ್ನ 2ನೇ ಪತ್ನಿ ರೂಬಿಕಾ ಪಹಾದಿಮ್ಳನ್ನು ಕೊಲೆ ಮಾಡಿದ್ದಾನೆ. […]