ಡಾ.ರಾಜಕುಮಾರ್ ಪುತ್ಥಳಿಯನ್ನೇ ಕದ್ದಿದ್ದ ಇಬ್ಬರು ವಶಕ್ಕೆ
ಬೆಂಗಳೂರು, ಫೆ.7- ಕಳ್ಳತನವಾಗಿದ್ದ ಲುಂಬಿನಿ ಗಾರ್ಡನ್ನಲ್ಲಿನ ವರನಟ ಡಾ.ರಾಜ್ಕುಮಾರ್ ಪುತ್ಥಳಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ನಾಗವಾರ ಕೆರೆಯ ಲುಂಬಿನಿ ಗಾರ್ಡನ್ನಲ್ಲಿ ವರನಟ ಡಾ.ರಾಜ್ಕುಮಾರ್ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಕಳೆದ 24ರಂದು ಈ ಪುತ್ಥಳಿ ಕಳ್ಳತನವಾಗಿರುವ ಬಗ್ಗೆ ಅರಣ್ಯ ವೀಕ್ಷಕರಾದ ಸಿ.ಕೆ.ರಾಜು ಎಂಬುವರು ತಕ್ಷಣ ಮೇಲಧಿಕಾರಿ ಯೋಗೇಶ್ ಅವರ ಗಮನಕ್ಕೆ ತಂದರು. ಈ ಬಗ್ಗೆ ಯೋಗೇಶ್ ಅವರು ದೂರು ನೀಡಿದ್ದು, ಅಮೃತಹಳ್ಳಿ ಠಾಣೆ ಪೊಲೀಸರು ಪ್ರಕರಣ […]