ಬೆಂಗಳೂರಲ್ಲಿ ದೀಪಾವಳಿ ಮುಗಿದರೂ ನಿಲ್ಲದ ಪಟಾಕಿ ಸದ್ದು, 40 ಮಂದಿ ಕಣ್ಣಿಗೆ ಹಾನಿ

ಬೆಂಗಳೂರು,ನ.3- ಪಟಾಕಿ ಸದ್ದು ಕಡಿಮೆಯಾದರೂ ಆದರಿಂದಾದ ದುಷ್ಪರಿಣಾಮ ಮಾತ್ರ ಕಡಿಮೆಯಾಗಿಲ್ಲ.ದೀಪಾವಳಿ ಮುಗಿದರೂ ರಾಜಧಾನಿಯಲ್ಲಿ ಪಟಾಕಿ ಅವಘಡ ನಿಂತಿಲ್ಲ. ಇದುವರೆಗೂ 40ಕ್ಕೂ ಹೆಚ್ಚು ಮಂದಿ ಪರೋಕ್ಷ ಇಲ್ಲವೆ ಪ್ರತ್ಯಕ್ಷವಾಗಿ ತಮ್ಮ ಕಣ್ಣುಗಳಿಗೆ ಹಾನಿ ಮಾಡಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಈ ಬಾರಿಯೇ ಅತಿ ಹೆಚ್ಚು ಮಂದಿ ಪಟಾಕಿ ಅವಘಡಗಳಿಂದಾಗಿ ತಮ್ಮ ಕಣ್ಣುಗಳಿಗೆ ಹಾನಿ ಮಾಡಿಕೊಂಡಿದ್ದಾರೆ ಎಂದು ಮಿಂಟೋ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಈ ಬಾರಿ ಪಟಾಕಿ ಸಿಡಿಸಿದವರಿಗಿಂತ ಪಟಾಕಿ ಸಿಡಿಸುವುದನ್ನು ನೋಡಿದವರಿಗೆ ಅತಿ ಹೆಚ್ಚು ಹಾನಿಯಾಗಿರುವುದು […]