ರಾತ್ರೋರಾತ್ರಿ ಮಾಯವಾದ 2 ಗೋಪುರಗಳು, ಗುಂಬಜ್ ವಿವಾದಕ್ಕೆ ತೆರೆ

ಮೈಸೂರು,ನ.27- ಬಸ್ ನಿಲ್ದಾಣದ ಮೇಲೆ ನಿರ್ಮಿಸಿದ್ದ ಗುಂಬಜ್ ವಿವಾದಕ್ಕೆ ತೆರೆ ಬಿದ್ದಿದೆ. ಮೈಸೂರು-ಊಟಿ ರಸ್ತೆಯಲ್ಲಿ ನಿರ್ಮಾಣ ಮಾಡಲಾಗಿದ್ದ ಬಸ್ ನಿಲ್ದಾಣದ ಮೇಲಿದ್ದ ಮೂರು ಗುಂಬಜ್‍ಗಳ ಪೈಕಿ ಎರಡು ಗುಂಬಜ್‍ಗಳನ್ನು ನಿನ್ನೆ ತಡರಾತ್ರಿ ಕಾರ್ಯಾಚರಣೆ ನಡೆಸಿ ತೆರವು ಮಾಡಲಾಗಿದೆ. ಮಧ್ಯದಲ್ಲಿರುವ ದೊಡ್ಡ ಗೋಪುರವನ್ನು ಬಿಟ್ಟು ಎಡ ಮತ್ತು ಭಾಗದಲ್ಲಿದ್ದ ಎರಡು ಚಿಕ್ಕ ಗೋಪುರಗಳನ್ನು ತೆರವು ಮಾಡಲಾಗಿದೆ. ಬಸ್ ನಿಲ್ದಾಣದ ಮೇಲಿನ ಗೋಪುರ ಗುಂಬಜ್ ಮಾದರಿ ಇದೆ ಎಂದು ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ರಹಸ್ಯ […]