ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು : ಸಚಿವೆ ಉಷಾ ಠಾಕೂರ್

ಮಾಹು,ನ.15- ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಮತ್ತು ಅಂತಹ ದುಷ್ಕರ್ಮಿಗಳ ಅಂತ್ಯಕ್ರಿಯೆಯಲ್ಲಿ ಸಮುದಾಯ ಭಾಗವಹಿಸಬಾರದು ಎಂದು ಮಧ್ಯಪ್ರದೇಶದ ಸಂಸ್ಕøತಿ ಸಚಿವೆ ಉಷಾ ಠಾಕೂರ್ ಒತ್ತಾಯಿಸಿದ್ದಾರೆ. ಇಂದೋರ್ ಜಿಲ್ಲೆಯ ಕೊಡಿರಿಯಾ ಗ್ರಾಮದಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕವಾಗಿ ಅತ್ಯಾಚಾರಿಗಳನ್ನು ನೇಣುಗೇರಿಸುವ ಜೊತೆಗೆ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಬಾರದು. ರಣಹದ್ದುಗಳು ಅವರ ದೇಹಗಳನ್ನು ಕುಕ್ಕಿ ಕುಕ್ಕಿ ತಿನ್ನಬೇಕು. ಅದನ್ನು ಎಲ್ಲರೂ ನೋಡುವಂತಾಗಬೇಕು. ಆ ಮೂಲಕ ಅತ್ಯಾಚಾರಕ್ಕೆ ಯಾರೂ ಧೈರ್ಯ ಮಾಡಬಾರದು ಎಂದು ಹೇಳಿದ್ದಾರೆ. ರಿಷಿ ಸುನಕ್‍ ಮತ್ತು ಮೋದಿ […]

ಶ್ರದ್ದಾ ವಿಕೃತ ಹತ್ಯೆ ಹಿಂದೆ ಲವ್ ಜಿಹಾದ್ ಶಂಕೆ, ಗಲ್ಲು ಶಿಕ್ಷೆಗೆ ಒತ್ತಾಯ

ನವದೆಹಲಿ,ನ.15- ತಮ್ಮ ಮಗಳನ್ನು ವಿಕೃತವಾಗಿ ಕೊಂದ ಆರೋಪಿಯನ್ನು ಗಲ್ಲು ಶಿಕ್ಷೆಗೊಳಪಡಿಸುವಂತೆ ಶ್ರದ್ದಾ ವಾಲ್ಕರ್ ಅವರ ತಂದೆ ಒತ್ತಾಯಿಸಿದ್ದಾರೆ. ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಶ್ರದ್ದಾ ತಂದೆ ವಿಕಾಸ್ ವಾಲ್ಕರ್, ಈ ಕೃತ್ಯದ ಹಿಂದೆ ಲವ್ ಜಿಹಾದ್ ನಡೆದಿರುವ ಅನುಮಾನವಿದೆ. ಆರೋಪಿಗೆ ಗಲ್ಲು ಶಿಕ್ಷೆ ಧಿವಿಸಬೇಕು. ನಮಗೆ ದೆಹಲಿ ಪೊಲೀಸರ ಮೇಲೆ ನಂಬಿಕೆ ಇದೆ. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಮಗಳೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಆರೋಪಿ ಅಫ್ತಾಬ್‍ನೊಂದಿಗೂ ಸಂಪರ್ಕದಲ್ಲಿರಲಿಲ್ಲ. ಶ್ರದ್ದಾ ತನ್ನ ಚಿಕ್ಕಪ್ಪನೊಂದಿಗೆ ಹೆಚ್ಚು […]