ಮಹಾರಾಷ್ಟ್ರ ಸಚಿವರು ಜತ್ ಜನರ ಮನವೊಲಿಸಲಿ: ಹೆಚ್ಡಿಕೆ

ದೇವನಹಳ್ಳಿ,ನ.29- ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬಂದು ಮಾತನಾಡುವುದಕ್ಕಿಂತ ಮಹಾರಾಷ್ಟ್ರದ ಸಾಂಗ್ಲಿ ಜತ್ತ ತಾಲ್ಲೂಕಿನ ಜನರ ಮನವೊಲಿಸುವುದು ಸೂಕ್ತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ದೇವನಹಳ್ಳಿ ತಾಲ್ಲೂಕಿನ ಆಲೂರುದುದ್ದನ ಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಸಚಿವರು ಬೆಳಗಾವಿ ಯಲ್ಲಿನ ಮರಾಠ ಸಂಘಟನೆಗಳೊಂದಿಗೆ ಮಾತನಾಡಲು ಆಗಮಿಸುವುದಕ್ಕಿಂತ ಜತ್ತ ಹಾಗು ಸಾಂಗ್ಲಿ ತಾಲ್ಲೂಕಿನ ಜನರ ಮನವೊಲಿಸಲು ಹೋಗಬೇಕು ಎಂದರು. ಬೆಳಗಾವಿಯಲ್ಲಿ ಎಂಇಎಸ್ ಜೊತೆ ಚರ್ಚೆ ಮಾಡುವುದಲ್ಲ ಎಂದ ಅವರು, ಜತ್ತಿ ಮತ್ತು ಸಾಂಗ್ಲಿ ಭಾಗದ ಜನರು ಕರ್ನಾಟಕಕ್ಕೆ ಸೇರಲು […]