ಕಳಂಕಿತ ಕೋಡಿಹಳ್ಳಿ ಹೊರ ಹಾಕಿ : ತೀವ್ರ ವಾಗ್ವಾದ

ಬೆಂಗಳೂರು, ಅ.15- ಭ್ರಷ್ಟಾಚಾರದ ಆರೋಪ ಹೊತ್ತಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಸಭೆಗೆ ಆಹ್ವಾನಿಸಿದ್ದಕ್ಕೆ ರೈತ ಮುಖಂಡರು ಸಚಿವರ ಎದುರೇ ಸಭೆಯಿಂದ ಹೊರ ಹಾಕಲು ತೀವ್ರ ವಾಗ್ವಾದ ನಡೆಯಿತು. ಕಬ್ಬು ಬೆಲೆ ನಿಗದಿ ಹಾಗೂ ಬೆಳೆಗಾರರ ಸಮಸ್ಯೆಗಳನ್ನು ಚರ್ಚಿಸಲು ವಿಧಾನಸೌಧದಲ್ಲಿ ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ರೈತ ಮುಖಂಡರ ಜೊತೆ ಸಭೆ ಕರೆದಿದ್ದರು. ಸಭೆಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಆಹ್ವಾನ ನೀಡಿರಲಿಲ್ಲ. ಆದರೆ ಅವರಾಗಿಯೇ ಸಭೆಯಲ್ಲಿ ಆಸೀನರಾಗಿದ್ದು ಕೆಲವು ರೈತರ ಮುಖಂಡರು […]