ತಪ್ಪು ಮಾಹಿತಿಗಳಿಂದ ಜನರನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ : ಡಿಕೆಶಿ
ಬೆಂಗಳೂರು, ಜ.30- ದೇಶದಲ್ಲಿ ಜನರನ್ನು ವಿವಿಧ ವಿಚಾರಗಳಲ್ಲಿ ತಪ್ಪು ದಾರಿಗೆ ಎಳೆಯಲಾಗುತ್ತಿದೆ. ನಿಧಾನಕ್ಕೆ ಜನರಿಗೆ ಎಲ್ಲವೂ ಅರ್ಥವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಹಾತ್ಮಗಾಂಜೀ ಅವರ 74 ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಷ್ಟ್ರಕ್ಕೆ ಒದಗಿರುವ ತಾತ್ಕಾಲಿಕ ಸಂಕಷ್ಟ ಸಮಯ, ಶಾಶ್ವತ ಅಲ್ಲ. ಜನರಿಗೆ ಶೀಘ್ರವೇ ಗಾಂಧಿಜೀ ಅವರ ತತ್ವಗಳು ಮನವರಿಕೆಯಾಗುತ್ತವೆ. ಅದಕ್ಕೆ ಉದಾಹರಣೆ ಎಂದರೆ ದೆಹಲಿಯಲ್ಲಿ ರೈತರು ಒಂದು ವರ್ಷ ಹೋರಾಟ ನಡೆಸಿ ಪ್ರಧಾನಿಯನ್ನು ಕ್ಷಮೆ ಕೇಳುವಂತೆ ಮಾಡಿದ್ದು […]