ಹೊಲದಲ್ಲಿ ನಾಲ್ಕು ಮುದ್ದಾದ ಹುಲಿ ಮರಿಗಳು ಪತ್ತೆ

ಹೈದರಾಬಾದ್.ಮಾ.9-ದಾರಿ ತಪ್ಪಿದ ನಾಲ್ಕು ಹುಲಿ ಮರಿಗಳನ್ನು ತಾಯಿ ಬಳಿ ಸೇರಿಸಲು ಆಂಧ್ರ ಅರಣ್ಯಾಧಿಕಾರಿಗಳು ಹುಡುಕಾಟ ಆರಂಭಿಸಿದ್ದಾರೆ. ಆಂಧ್ರಪ್ರದೇಶದ ನಂದ್ಯಾಲ-ಕರ್ನೂಲ್ ಪ್ರದೇಶ ಬಳಿಯ ಕೃಷಿ ಹೊಲದಲ್ಲಿ ನಾಲ್ಕು ಮುದ್ದಾದ ಹುಲಿ ಮರಿಗಳು ಪತ್ತೆಯಾಗಿವೆ. ಸಣ್ಣ ಹುಲಿ ಮರಿಗಳನ್ನು ಬೀದಿ ನಾಯಿಗಳಿಂದ ರಕ್ಷಿಸಲು ಅವರು ಮೊದಲು ಅವುಗಳನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸಿ ನಂತರ ಪಶುವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮರಿಗಳನ್ನು ಕಳೆದುಕೊಂಡಿರುವ ಹುಲಿ ಆಕ್ರಮಣಕಾರಿಯಾಗುವ ಸಾಧ್ಯತೆ ಇರುವುದರಿಂದ ಹುಲಿ ಮರಿಗಳನ್ನು ತಾಯಿ ಹುಲಿ ಬಳಿಗೆ ಸೇರಿಸಲು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು […]
ಬಿ.ಎಲ್.ಸಂತೋಷ್ಗೆ ಲುಕ್ಔಟ್ ನೋಟಿಸ್

ಹೈದರಾಬಾದ್,ನ.22- ಶಾಸಕರ ಖರೀದಿಗೆ ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ಗೆ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಬಿ.ಎಲ್.ಸಂತೋಷ್ ಜತೆ ಪ್ರಕರಣದ ಇಬ್ಬರು ಆರೋಪಿಗಳಾದ ತುಷಾರ್ ವೆಲ್ಲಿಪಲ್ಲಿ ಹಾಗೂ ಜಗ್ಗುಸ್ವಾಮಿ ಅವರಿಗೆ ಹೈದರಾಬಾದ್ನ ವಿಶೇಷ ತನಿಖಾ ತಂಡ ಲುಕ್ಔಟ್ ನೋಟಿಸ್ ಜಾರಿ ಮಾಡಿದೆ. ಯಾವುದೇ ಒಬ್ಬ ಆರೋಪಿಗೆ ಲುಕ್ಔಟ್ ನೋಟಿಸ್ ಜಾರಿ ಮಾಡಿದರೆ ಅವರು ದೇಶಬಿಟ್ಟು ಹೊರ ಹೋಗುವಂತಿಲ್ಲ. ವಿಮಾನ ನಿಲ್ದಾಣ, ಬಂದರು ಸೇರಿದಂತೆ ಯಾವುದೇ ಸ್ಥಳದಲ್ಲಾದರೂ ಬಂಧಿಸಬಹುದಾಗಿದೆ. ಗಡಿ ವಿವಾದ […]
ದೆಹಲಿ ಡಿಸಿಎಂ ಶಿಸೋಡಿಯಾಗೆ ಲುಕೌಟ್ ನೋಟಿಸ್ ನೀಡಿದ ಸಿಬಿಐ
ನವದೆಹಲಿ,ಆ.21- ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಶಿಸೋಡಿಯಾ ಅವರಿಗೆ ಸಿಬಿಐ ಲುಕೌಟ್ ನೋಟಿಸ್ ಜಾರಿ ಮಾಡಿದೆ. ದೆಹಲಿಯ ಅಬಕಾರಿ ನೀತಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪ ಕೇಳಿಬಂದಿತ್ತು. ಈ ಕುರಿತು ತನಿಖೆ ಕೈಗೆತ್ತಿಕೊಂಡ ಸಿಬಿಐ ಕಳೆದ ಶುಕ್ರವಾರ ದೆಹಲಿ, ಉತ್ತರಪ್ರದೇಶ ಸೇರಿದಂತೆ 31 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಮನೀಶ್ ಶಿಸೋಡಿಯಾ ಸೇರಿದಂತೆ 13 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈಗ ಲುಕೌಟ್ ನೋಟಿಸ್ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಶಿಸೋಡಿಯ ಇಂದು ಟ್ವೀಟ್ ಮಾಡಿದ್ದು, ನಿಮ್ಮ ಎಲ್ಲ ದಾಳಿಗಳು […]