ಶಿವಮೊಗ್ಗ: ಡಿಸಿ ಕಚೇರಿ ಮೇಲೆ ಆಜಾನ್ ಕೂಗಿ ಯುವಕನ ಉದ್ಧಟತನ

ಶಿವಮೊಗ್ಗ, ಮಾ.19- ಜಿಲ್ಲಾಧಿಕಾರಿ ಕಚೇರಿ ಮೇಲೆ ನಿಂತು ಯುವಕನೊಬ್ಬ ಆಜಾನ್ ಕೂಗಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಜಜಾನ್ ಬಗ್ಗೆ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಯುವಕ ಕಚೇರಿ ಆವರಣದಲ್ಲಿ ನಿಂತು ಆಜಾನ್ ಕೂಗಿದ್ದ. ಪ್ರತಿಭಟನೆ ವೇಳೆ ಮುಸ್ಲಿಂ ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಮೇಲೆ ಹತ್ತಿ ಆಜಾನ್ ಕೂಗಿ ಉದ್ದಟತನ ಪ್ರದರ್ಶಿಸಿದ್ದ. […]
ತಾಯಿ ಗರ್ಭದಲ್ಲೇ ಹಸುಗೂಸಿನ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿ

ನವದೆಹಲಿ,ಮಾ.15- ತಾಯಿ ಗರ್ಭದಲ್ಲಿರುವ ಹಸುಗೂಸಿನ ಹೃದಯ ಶಸ್ತ್ರಚಿಕಿತ್ಸೆ ನೀಡುವಲ್ಲಿ ದಹೆಲಿ ಏಮ್ಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ತಾಯಿಯ ಗರ್ಭದಲ್ಲಿರುವ ದ್ರಾಕ್ಷಿ ಗಾತ್ರದ ಮಗುವಿನ ಹೃದಯದಲ್ಲಿ ಕಾಣಿಸಿಕೊಂಡಿದ್ದ ಕವಾಟದ ಬಲೂನ್ ತೊಂದರೆಯನ್ನು ನಿವಾರಿಸುವಲ್ಲಿ ದೆಹಲಿಯ ಏಮ್ಸ್ ಯಶಸ್ವಿಯಾಗಿದೆ. ಮೂರು ಬಾರಿ ಗರ್ಭ ನಷ್ಟವಾಗಿದ್ದ 28 ವರ್ಷದ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಗುವಿನ ಹೃದಯದ ಸ್ಥಿತಿಯ ಬಗ್ಗೆ ಸಂವಹನ ನಡೆಸಿದ ನಂತರ ಮತ್ತು ಫಲಿತಾಂಶವನ್ನು ಸುಧಾರಿಸುವ ಇಚ್ಛೆಯೊಂದಿಗೆ ಕಾರ್ಯವಿಧಾನಕ್ಕೆ ಒಪ್ಪಿಗೆ ನೀಡಿದ ನಂತರ ಪೋಷಕರು ಪ್ರಸ್ತುತ ಗರ್ಭಧಾರಣೆಯನ್ನು ಮುಂದುವರಿಸಲು […]