ಜೋಶಿಮಠ ತೆರವು ಕಾರ್ಯಚರಣೆ ಆರಂಭ

ನವದೆಹಲಿ,ಜ.10- ಉತ್ತರಾಖಂಡ್‍ನ ಜೋಶಿಮಠದಲ್ಲಿ ಬಿರುಕು ಬಿಟ್ಟಿರುವ ಮತ್ತು ತೀವ್ರವಾಗಿ ಹಾನಿಗೀಡಾಗಿರುವ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯ ಇಂದಿನಿಂದ ಆರಂಭವಾಗಿದೆ. ಜೋಶಿಮಠವನ್ನು ಅಪಾಯ, ಬಫರ್ ಮತ್ತು ಸಂಪೂರ್ಣವಾಗಿ ಸುರಕ್ಷಿತ ಎಂಬ ಮೂರು ವಲಯಗಳನ್ನಾಗಿ ವಿಂಗಡಿಸಿ ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೂ 678 ಕಟ್ಟಡಗಳು ಬಿರುಕು ಬಿಟ್ಟಿವೆ. ಅವುಗಳಲ್ಲಿ ಹೆಚ್ಚು ಹಾನಿಗೊಳಗಾಗಿರುವ ಕಟ್ಟಡಗಳು ಹಾಗೂ ವಾಲಿರುವ ಮೌಂಟ್ ವ್ಯೂ ಮತ್ತು ಮಲಾರಿ ಇನ್ ಹೋಟೆಲ್‍ಗಳನ್ನು ಸಂಪೂರ್ಣ ತೆರವುಗೊಳಿಸಲಾಗುತ್ತಿದೆ. ಸುಮಾರು 4,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರಿಗೆ […]

ಮಾನವ ಕಳ್ಳಸಾಗಾಣಿಕೆ ಜಾಲ ಬಯಲಿಗೆಳೆದ ರಾಂಚಿ ಪೊಲೀಸರು

ರಾಂಚಿ, ಆ.21 – ಮಾನವ ಕಳ್ಳಸಾಗಾಣಿಕೆ ಜಾಲವನ್ನು ರಾಂಚಿ ಪೊಲೀಸರು ಮತ್ತೊಮ್ಮೆ ಬಯಲಿಗೆಳೆದಿದ್ದಾರೆ. ಜಾರ್ಖಂಡ್‍ನಿಂದ ಅಪಹರಿಸಿದ್ದ ನಾಲ್ವರು ಮಕ್ಕಳು ಮತ್ತು ಮಹಿಳೆಯೊಬ್ಬರನ್ನು ದೆಹಲಿಯಿಂದ ರಕ್ಷಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯೂ ಸೇರಿದಂತೆ ಕಳೆದ ಫೆಬ್ರವರಿಯಿಂದ ಇಲ್ಲಿಯವರೆಗೆ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ರಾಜ್ಯದ ಒಟ್ಟು 49 ಜನರನ್ನು ಕಳ್ಳಸಾಗಣೆದಾರರ ಕಪಿಮುಷ್ಠಿಯಿಂದ ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಅಂತಹ ಕಳ್ಳಸಾಗಣೆದಾರರು ಜಾರ್ಖಂಡ್‍ನಲ್ಲಿ ಸಕ್ರಿಯರಾಗಿದ್ದಾರೆ, ಯುವತಿಯರಿಗೆ ಉದ್ಯೋಗ, ಉತ್ತಮ ಜೀವನವನ್ನು ಭರವಸೆ ನೀಡಿ ದೆಹಲಿಗೆ ಕರೆತಂದು ಮಾರಾಟ ಮಾಡುತ್ತಾರೆ. […]