ಸ್ವಪಕ್ಷೀಯರ ಮನೆ ಮೇಲೆಯೇ ಯೋಗಿ ಬುಲ್ಡೋಜರ್ ದಾಳಿ
ನೊಯಿಡಾ,ಆ.8- ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರ ಸರ್ಕಾರದ ಬುಲ್ಡೋಜರ್ ಸ್ವಪಕ್ಷೀಯರ ವಿರುದ್ಧವೂ ಘರ್ಜಿಸಿದೆ. ಈ ಹಿಂದೆ ಕೋಮುಗಲಭೆಯಲ್ಲಿ ಆರೋಪಿ ಗಳಾಗಿದ್ದವರು ಮತ್ತು ಕುಮ್ಮಕ್ಕು ನೀಡಿದವರ ಮನೆಗಳ ಮೇಲೆ ಬುಲ್ಡೋಜರ್ ದಾಳಿ ನಡೆದಿತ್ತು. ಇದು ದೇಶಾದ್ಯಂತ ಸುದ್ದಿಯಾಗಿ ವಾದ-ವಿವಾದಗಳಿಗೂ ಕಾರಣವಾಗಿದ್ದಲ್ಲದೆ, ಉತ್ತರ ಪ್ರದೇಶದ ಮಾದರಿ ಎಂಬ ಪ್ರತ್ಯೇಕ ಗುರುತಿಸುವಿಕೆಯನ್ನೂ ಸಂಪಾದಿಸಿತ್ತು. ಈಗಲೂ ಯಾವುದೇ ರೀತಿಯ ವಾದಗಳು ಕೇಳಿ ಬಂದಾಗ ಅಲ್ಲಿ ಬುಲ್ಡೋಜರ್ ದಾಳಿ ಆಗಬೇಕು ಎಂಬ ಚರ್ಚೆಗಳು ನಡೆಯುತ್ತವೆ. ಆದರೆ, ಪ್ರತಿಪಕ್ಷಗಳು ಯೋಗಿ ಸರ್ಕಾರ […]