ದೇವಸ್ಥಾನದ ಆವರಣದಲ್ಲಿ ಕಾಲ್ತುಳಿತಕ್ಕೆ ಮೂವರು ಮಹಿಳೆಯರು ಬಲಿ

ಸಿರಖ್ , ಅ 8-ಇಂದು ಮುಂಜಾನೆ ರಾಜಸ್ಥಾನದ ಸಿಕಖ್ ಜಿಲ್ಲಾಯ ಐತಿಹಾಸಿಕ ಖಾತು ಶ್ಯಾಮ್ ದೇವಾಲಯದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಹಿಂದೂಗಳ ಶುಭ ದಿನವಾದ ಗೈರಾಸ್ ಹಬ್ಬಕ್ಕಾಗಿ ರಾಜ್ಯದ ವಿವಿದೆಡೆಗಳಿಂದ ದೇವರ ದರ್ಶನಕ್ಕೆ ಮುಂಜಾನೆಯೆ ಭಕ್ತರು ಜಮಾಯಿಸಿ ಉದ್ದನೆಯ ಸರತಿ ಸಾಲುಗಳಲ್ಲಿ ನಿಂತಿದ್ದರು. ಬೆಳಗಿನ ಜಾವ 4.30ರ ಸುಮಾರಿಗೆ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆಯೇ ಭಕ್ತರ ದಂಡು ದರ್ಶನಕ್ಕೆ ಮುಗಿಬಿದ್ದು ನುಗ್ಗಿದಾಗ ಈ ದುರ್ಘಟನೆ ನಡೆದಿದೆ. ಸರದಿ ನಿಂತಿದ್ದ 63 ವರ್ಷದ […]