ಉದ್ದೇಶಪೂರ್ವಕವಾಗಿಯೇ ರೈಲಿನ ಹೆಸರು ಬದಲಾವಣೆ: ಪ್ರತಾಪ್‍ಸಿಂಹ

ಮೈಸೂರು, ಅ.12- ರೈಲಿಗೆ ಟಿಪ್ಪು ಹೆಸರನ್ನು ಉದ್ದೇಶಪೂರ್ವಕವಾಗಿಯೇ ಬದಲಾಯಿಸಲಾಗಿದೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದರು. ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರೈಲ್ವೆ ಇತಿಹಾಸದಲ್ಲೇ ರೈಲಿಗೆ ಹೆಸರಿಡುವ ಸಂಪ್ರದಾಯ ನಡೆದು ಬಂದಿದೆ. ಆದರೆ ಇಟ್ಟ ಹೆಸರನ್ನು ಬದಲಿಸಿರುವುದು ಇದೇ ಮೊದಲು ಎಂದರು. ಮೈಸೂರಿಗೆ ಟಿಪ್ಪು ಕೊಡುಗೆ ಏನೇನೂ ಇಲ್ಲ, ಹಾಗಾಗಿ ರೈಲಿಗೆ ಟಿಪ್ಪು ಹೆಸರು ಬದಲಾಯಿಸಿ ಒಡೆಯರ ಹೆಸರನ್ನು ಇಡಲಾಗಿದೆ. ಒಡೆಯರ ಅವರ ಕೊಡುಗೆ ನೂರಾರು ಇದೆ. ಟಿಪ್ಪು ಕೊಡುಗೆ ಏನಿದೆ ವಿವರಿಸಲಿ ಎಂದು […]

ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಮರುನಾಮಕರಣಕ್ಕೆ ವಾಟಾಳ್ ಆಕ್ರೋಶ

ಬೆಂಗಳೂರು,ಅ.8- ಟಿಪ್ಪು ಎಕ್ಸ್‍ಪ್ರೆಸ್ ಹೆಸರು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ. ಟಿಪ್ಪು ಎಕ್ಸ್‍ಪ್ರೆಸ್ ಹೆಸರು ಬದಲಾಯಿಸಿದ್ದು ಸರಿಯಲ್ಲ. ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಣೆ ಮಾಡಿರುವ ಟಿಪ್ಪು ಹೆಸರನ್ನು ಕೈ ಬಿಟ್ಟಿರುವುದು ಕೇಂದ್ರ ಸರ್ಕಾರದ ಸಣ್ಣತನಕ್ಕೆ ಹಿಡಿದ ಕೈಗನ್ನಡಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ಎರಡು ಮಕ್ಕಳನ್ನು ದೇಶಕ್ಕಾಗಿ ಒತ್ತೆಯಿಟ್ಟು ದೇಶಪ್ರೇಮ ಮೆರೆದಿದ್ದ ಟಿಪ್ಪು ಅವರ ಹೆಸರಿನಲ್ಲಿ ಇದುವರೆಗೂ ಓಡಾಡುತ್ತಿದ್ದ ಟಿಪ್ಪು ಎಕ್ಸ್‍ಪ್ರೆಸ್ ರೈಲಿಗೆ ಇದೀಗ […]