ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ನಕಾರ, ಟಿಆರ್‌ಎಸ್ ಸಂಸದರ ಸಭಾತ್ಯಾಗ

ನವದೆಹಲಿ, ಫೆ.10- ಅಖಂಡ ಆಂಧ್ರ ಪ್ರದೇಶ ವಿಭಜನೆ ರೀತಿಯ ಬಗ್ಗೆ ಟೀಕೆ ಮಾಡಿದ ಪ್ರಧಾನಿ ವಿರುದ್ಧ ಟಿಆರ್‌ಎಸ್ ನ ರಾಜ್ಯಸಭೆ ಸದಸ್ಯರು ಹಕ್ಕುಚ್ಯುತಿ ಮಂಡನೆಗೆ ಪಟ್ಟು ಹಿಡಿದು, ಅವಕಾಶ ಸಿಗದಿದ್ದಾಗ ಸಭಾತ್ಯಾಗ ಮಾಡಿದ ಪ್ರಸಂಗ ನಡೆದಿದೆ. ರಾಷ್ಟ್ರಪತಿ ಅವರು ಸಂಸತ್‍ನ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದ ಮೇಲೆ ಧನ್ಯವಾದ ಹೇಳುವ ಚರ್ಚೆಗೆ ಮಂಗಳವಾರ ಉತ್ತರ ನೀಡಿದ ಪ್ರಧಾನಿ ಅವರು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿಭಜನೆಯನ್ನು ಪ್ರಸ್ತಾಪಿಸಿದರು. ರಾಜ್ಯಗಳ ಮರುವಿಂಗಡನೆ ವೇಳೆ ಪ್ರಜಾಸತಾತ್ಮಕ ಚರ್ಚೆಗಳು […]