ಅಯೋಧ್ಯೆಯ ಧನ್ನಿಪುರದಲ್ಲಿ ಶೀಘ್ರವೇ ಮಸೀದಿ ನಿರ್ಮಾಣ ಆರಂಭ

ಲಕ್ನೋ,ಫೆ.26- ಹಲವು ಅಡೆತಡೆಗಳ ಬಳಿಕ ಎಲ್ಲಾ ರೀತಿಯ ಸಿದ್ಧತೆಗಳೊಂದಿಗೆ ಅಯೋಧ್ಯೆ ಜಿಲ್ಲೆ ಧನ್ನಿಪುರದಲ್ಲಿ ಶೀಘ್ರವೇ ಮಸೀದಿ ನಿರ್ಮಾಣ ಆರಂಭಗೊಳ್ಳುವ ನಿರೀಕ್ಷೆಗಳಿವೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ ತಿಳಿಸಿದೆ. ಆರಂಭದಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು (ಎನ್‍ಒಸಿ) ಪಡೆಯುವಲ್ಲಿ ವಿಳಂಬವಾಗಿತ್ತು. ನಂತರ ಭೂ ಬಳಕೆ ಬದಲಾವಣೆಯಲ್ಲಿ ವಿಳಂಬವಾಯಿತು. ಈಗ ಎಲ್ಲಾ ಅನುಮತಿಗಳು ದೊರೆಯುವ ಕಾಲ ಸನ್ನಿತವಾಗಿದೆ. ರಾಜ್ಯ ಸರ್ಕಾರ ನೀಡಿರುವ ಐದು ಎಕರೆ ಜಾಗದಲ್ಲಿ ಮಸೀದಿ, ಆಸ್ಪತ್ರೆ, ಸಂಶೋಧನಾ ಸಂಸ್ಥೆ, ಸಮುದಾಯ ಅಡುಗೆ ಕೋಣೆ ಮತ್ತು ಗ್ರಂಥಾಲಯವನ್ನು ನಿರ್ಮಿಸಲಾಗುವುದು ಎಂದು ಇಂಡೋ-ಇಸ್ಲಾಮಿಕ್ […]

ಶಿಕ್ಷಕಿಗೆ ಕಿರುಕುಳ ನೀಡಿದ 4 ವಿದ್ಯಾರ್ಥಿಗಳ ಬಂಧನ

ಮೀರತ್ (ಯುಪಿ), ನ.28 -ಶಾಲೆಯೊಂದರಲ್ಲಿ ಮಹಿಳಾ ಶಿಕ್ಷಕರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಅಶ್ಲೀಲ ಪದಗಳಿಂದ ಶಿಕ್ಷಕಿಯನ್ನು ನಿಂದಿಸಿದ ಎರಡು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‍ಆಗಿದ್ದು ತುರ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಿಥೌರ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಧನಾ ಇನಾಯತ್‍ಪುರ ಗ್ರಾಮದ ಶಾಲೆಯಲೀ ಘಟನೆ ನಡೆದಿದೆ. ಲಿಖಿತ ದೂರಿನಲ್ಲಿ, ಶಿಕ್ಷಕಿಯು ಶಾಲೆ 12 ನೇ ತರಗತಿಯ ಕೆಲವು ವಿದ್ಯಾರ್ಥಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಶಿಕ್ಷಕಿಯ ವಿರುದ್ಧ ವಿದ್ಯಾರ್ಥಿಗಳು […]