ಡಿಕೆಶಿ ಶತ್ರು ಭೈರವಿ ಯಾಗ ಆರೋಪ ತಳ್ಳಿಹಾಕಿದ ದೇವಸ್ಥಾನದ ಆಡಳಿತ ಮಂಡಳಿ

ಕೋಝಿಕ್ಕೋಡು,ಜೂ.1– ಕೇರಳದ ದೇವಸ್ಥಾನದಲ್ಲಿ ಪ್ರಾಣಿ ಬಲಿ ಒಳಗೊಂಡ ಶತ್ರು ಭೈರವಿ ಯಾಗ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿದ್ದ ಹೇಳಿಕೆಯನ್ನು ಕಣ್ಣೂರಿನ ತಳಿಪರಂಬದಲ್ಲಿರುವ ಶಿವ ದೇವಾಲಯವಾದ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ತಳ್ಳಿಹಾಕಿದೆ. ಕೇರಳದ ದೇವಸ್ಥಾನವೊಂದರಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡಿರುವ ಶತ್ರು ಭೈರವಿ ಯಾಗವನ್ನು ಗುರುವಾರ ನಡೆಸಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದರಲ್ಲದೆ, ತಮ್ಮ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕದ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಮಾಟಮಂತ್ರ ಮಾಡಲಾಗಿದೆ ಎಂದು ಆರೋಪಿಸಿದ್ದರು. ಕೇರಳದ ಬಹುತೇಕ ದೇವಾಲಯಗಳಲ್ಲಿ ಶತ್ರು ಸಂಹಾರ … Continue reading ಡಿಕೆಶಿ ಶತ್ರು ಭೈರವಿ ಯಾಗ ಆರೋಪ ತಳ್ಳಿಹಾಕಿದ ದೇವಸ್ಥಾನದ ಆಡಳಿತ ಮಂಡಳಿ