ಅರುಣಾಚಲ ಪ್ರದೇಶದಲ್ಲಿ ಸೇನಾವಾಹನ ಕಮರಿಗೆ ಬಿದ್ದು 3 ಯೋಧರು ಸಾವು

ಇಟಾನಗರ, ಆ. 28:ಅರುಣಾಚಲ ಪ್ರದೇಶದ ಮೇಲ್‌ ಸುಬಾನ್ಸಿರಿ ಜಿಲ್ಲೆಯಲ್ಲಿ ಸೇನಾ ಟ್ರಕ್‌ ರಸ್ತೆಯಿಂದ ಸ್ಕಿಡ್‌ ಆಗಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಮೂವರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ತಾಪಿ ಗ್ರಾಮದ ಬಳಿಯ ಟ್ರಾನ್ಸ್ ನ ಅರುಣಾಚಲ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರುತಿಳಿಸಿದ್ದಾರೆ. ಮೃತರನ್ನು ಹವಾಲ್ದಾರ್‌ ನಖತ್‌ ಸಿಂಗ್‌, ನಾಯಕ್‌ ಮುಖೇಶ್‌ ಕುಮಾರ್‌ ಮತ್ತು ಗ್ರೆನೇಡಿಯರ್‌ ಆಶಿಶ್‌ ಕುಮಾರ್‌ ಎಂದು ಗುರುತಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಅಪಘಾತಕ್ಕೀಡಾದ ಸೇನಾ ಟ್ರಕ್‌ … Continue reading ಅರುಣಾಚಲ ಪ್ರದೇಶದಲ್ಲಿ ಸೇನಾವಾಹನ ಕಮರಿಗೆ ಬಿದ್ದು 3 ಯೋಧರು ಸಾವು