ಯುಗಾದಿ ಹಬ್ಬದಂದು ಕೃಷ್ಣಾ ನದಿಗೆ ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರು ಪಾಲು

Three Boys drowned in the Krishna River

0
712

ಬಾಗಲಕೋಟೆ, ಮಾ.31– ಯುಗಾಗಿ ಹಬ್ಬದಂದು ಕೃಷ್ಣ ನದಿಗೆ ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರು ಪಾಲಾದ ಘಟನೆ ನಡೆದಿದೆ. ತಾಲ್ಲೂಕಿನ ಇಲ್ಲಾಳ ಗ್ರಾಮದ ಸೋಮಶೇಖರ ಬೊಪ್ಪಣ್ಣ ದೇವರಮನಿ(15), ಮಲ್ಲಪ್ಪ ಬಸಪ್ಪ ಬಗಲಿ(15) ಹಾಗೂ ಪರನಗೌಡ ಮಲ್ಲಪ್ಪಬಿಳಗಿ(17) ನೀರು ಪಾಲಾದ ದುರ್ದೈವಿಗಳು.

ನಿನ್ನೆ ಸ್ನಾನಕ್ಕೆಂದು ಈ ಮೂವರೂ ಕೃಷ್ಣ ನದಿಗೆ ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಘಟನೆ ನಡೆದ ತಕ್ಷಣ ಮೀನುಗಾರರು ಕಾಣೆಯಾದವರಿಗಾಗಿ ಹುಡುಕಾಟ ನಡೆಸಿ ಸೋಮಶೇಖರ ಬೊಪ್ಪಣ್ಣ ದೇವರಮನಿಯವರ ಮೃತದೇಹ ಹೊರತೆಗೆದಿದ್ದಾರೆ. ಜಿಲ್ಲೆಯ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಕಾಣೆಯಾದ ಇನ್ನಿಬ್ಬರಿಗೆ ಶೋಧ ಕಾರ್ಯ ಮುಂದುವರೆಸಿದೆ.