ನಿತ್ಯ ನೀತಿ: ನಡೆದು ಹೋಗಿದ್ದು, ಮರೆತು ಹೋಗಿದ್ದು, ಮುಗಿದು ಹೋಗಿದ್ದು, ಬಿಟ್ಟು ಹೋದವರು, ಮರೆತು ಹೋದವರನ್ನು ಮರೆತು ಬಿಡಿ. ಆದರೆ ಅವರಿಂದ ಕಲಿತ ಪಾಠವ ಮರೆಯದಿರಿ.
ಪಂಚಾಂಗ ಮಂಗಳವಾರ 31-01-2023
ಶುಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ / ತಿಥಿ: ದಶಮಿ / ನಕ್ಷತ್ರ: ರೋಹಿಣಿ / ಯೋಗ: ಬ್ರಹ್ಮ / ಕರಣ: ವಣಿಜ್
ಸೂರ್ಯೋದಯ: ಬೆ.06.45
ಸೂರ್ಯಾಸ್ತ : 06.20
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30
ರಾಶಿ ಭವಿಷ್ಯ
ಮೇಷ: ನಿಮ್ಮ ಸುತ್ತಮುತ್ತಲ ವಾತಾವರಣ ಸಂತಸದಾಯಕವಾಗಿರಲಿದೆ. ಕೆಲವು ವ್ಯಾಜ್ಯಗಳು ಒಡಹುಟ್ಟಿದವರ ಸಹಕಾರದಿಂದ ಬಗೆಹರಿಯಲಿವೆ.
ವೃಷಭ: ವೃತ್ತಿಯಲ್ಲಿ ಅಧಿಕಾರಿಗಳು ನಿಮ್ಮ ಕಾರ್ಯ ಸಾಧನೆ ಗುರುತಿಸಿ ಹೆಚ್ಚಿನ ಸೌಲಭ್ಯ ಒದಗಿಸುವರು.
ಮಿಥುನ: ತಪ್ಪುಗಳನ್ನು ತಿದ್ದಿ ಹೇಳುವಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ನೆರವಿಗೆ ಬರುವರು.
ಕಟಕ: ಸಹವರ್ತಿಗಳ ಸಲಹೆ-ಸಹಕಾರ ಪಡೆಯುವುದು ಅನಿವಾರ್ಯವಾಗಲಿದೆ.
ಸಿಂಹ: ಕೆಲಸ-ಕಾರ್ಯಗಳಲ್ಲಿ ಕಷ್ಟಗಳು ಎದುರಾಗ ಬಹುದು. ಹಾಗೆಂದು ನಿರ್ಲಕ್ಷ್ಯ ತೋರದಿರಿ.
ಕನ್ಯಾ: ಪತ್ರಿಕೋದ್ಯಮ ದವರಿಗೆ ಕೆಲಸದ ಹೊರೆ ಅತಿಯಾಗಿ ಎದುರಾಗಬಹುದು.
ತುಲಾ: ಸ್ನೇಹ-ಸಂಬಂಧಗಳು ಗಟ್ಟಿಯಾಗಿ ಅವರಿಂದ ಸಹಾಯ-ಸಹಕಾರ ದೊರೆಯಲಿದೆ.
ವೃಶ್ಚಿಕ: ನಿಮ್ಮ ಪ್ರತಿಭೆ ಗುರುತಿಸಿಲ್ಲ ಎಂಬ ನೋವು ನಿಮ್ಮಿಂದ ದೂರಾಗಲಿದೆ.
ಧನುಸ್ಸು: ಗಣ್ಯ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುವ ಸಂದರ್ಭ ಬರಬಹುದು.
ಮಕರ: ಮೇಲಧಿಕಾರಿಗಳ ಮೆಚ್ಚುಗೆ ಪಡೆಯಲು ಹೆಚ್ಚಿನ ಪ್ರಯತ್ನ ನಡೆಸಿ.
ಕುಂಭ: ಕಾರ್ಮಿಕ ವರ್ಗದವರಿಗೆ ಪರಿಶ್ರಮದಿಂದ ಹೆಚ್ಚಿನ ಆದಾಯ ಸಿಗಲಿದೆ.
ಮೀನ: ಯಶಸ್ಸಿನ ಕೆಲಸಗಳಿಗೆ ಕೈ ಹಾಕಲು ಹಿಂದಿನ ಸೋಲು ಬಾಧಿಸಬಹುದು.
DailyHoroscope, #Horoscope, #KannadaHoroscope, #TodayHoroscope, #ರಾಶಿಭವಿಷ್ಯ,