ನಿತ್ಯ ನೀತಿ :ಧರ್ಮ ಒಂದೇ ನಿಜವಾದ ಮಿತ್ರ. ಸಾವಿನಲ್ಲಿಯೂ ಸಹ ಜತೆಯಲ್ಲಿರುತ್ತದೆ. ಉಳಿದೆಲ್ಲವೂ ಶರೀರದೊಡನೆಯೇ ನಾಶವಾಗುತ್ತವೆ.
# ಪಂಚಾಂಗ : ಭಾನುವಾರ , 13-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಶಿಶಿರ ಋತು | ಮಾಘ ಮಾಸ | ಶುಕ್ಲ ಪಕ್ಷ | ತಿಥಿ: ದ್ವಾದಶಿ| ನಕ್ಷತ್ರ: ಆರಿದ್ರಾ| ಮಳೆ ನಕ್ಷತ್ರ: ಧನಿಷ್ಠ
* ಸೂರ್ಯೋದಯ : ಬೆ.06.43
* ಸೂರ್ಯಾಸ್ತ : 06.25
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ : 3.00-4.30
# ರಾಶಿಭವಿಷ್ಯ
ಮೇಷ: ಇಂದು ಬಹಳ ಸಂತೋಷ, ಶಾಂತಿಯುತ ಮತ್ತು ಪ್ರಗತಿಪರ ದಿನವಾಗಿರುತ್ತದೆ.
ವೃಷಭ: ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ಪಡೆಯುತ್ತೀರಿ. ಸಂತೋಷಕ್ಕಾಗಿ ಖರ್ಚು ಮಾಡುವಿರಿ.
ಮಿಥುನ: ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಮನಸ್ಸಿನಲ್ಲಿ ಹಲವಾರು ಸಮಸ್ಯೆಗಳು ಉದ್ಭವಿಸಬಹುದು.
ಕಟಕ: ಮನಸ್ಸನ್ನು ಶಾಂತವಾಗಿಟ್ಟುಕೊಂಡರೆ ಖರ್ಚು ನಿಯಂತ್ರಿಸಬಹುದು.
ಸಿಂಹ: ಮಾತು ಮತ್ತು ಉತ್ತಮ ನಡವಳಿಕೆಯಿಂದ ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುವಿರಿ.
ಕನ್ಯಾ: ಮನಸ್ಥಿತಿಯಲ್ಲಿ ಉತ್ತಮ ಬದಲಾವಣೆ ಗಳಾಗ ಲಿವೆ. ವೈವಾಹಿಕ ಜೀವನದಲ್ಲಿ ಸುಖಮಯವಾಗಿರುತ್ತದೆ.
ತುಲಾ: ಅನಗತ್ಯ ಖರ್ಚು ಗಳು ಹೆಚ್ಚಾಗಬಹುದು, ಆದ್ದ ರಿಂದ ಬುದ್ಧಿವಂತಿಕೆಯಿಂದ ಹಣ ಖರ್ಚು ಮಾಡಿ.
ವೃಶ್ಚಿಕ: ಕುಟುಂಬದಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರ ಬಗ್ಗೆ ವಿಶೇಷ ಗಮನ ನೀಡುವುದು ಒಳಿತು.
ಧನುಸ್ಸು: ಗುರುಗಳ ನೆರವಿನಿಂದ ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
ಮಕರ: ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಗಣೇಶನ ಆರಾಧನೆ ಮಾಡಿ.
ಕುಂಭ: ಉದ್ಯಮಿಗಳು ಹಿಂದೆ ಮಾಡಿದ ಯೋಜನೆಗಳಿಂದ ಲಾಭ ಗಳಿಸುವರು.
ಮೀನ: ತಂದೆಯೊಂದಿಗಿದ್ದ ಭಿನ್ನಾಭಿಪ್ರಾಯ ದೂರವಾಗಿ ಸಂತಸದ ವಾತಾವರಣ ಮೂಡಲಿದೆ.
