ನಿತ್ಯ ನೀತಿ :ನಮ್ಮನ್ನು ಅವಮಾನಿಸಿ ಬೀಳಿಸಿದವರೆದುರು ಎದ್ದು ನಿಲ್ಲುವುದೇ ಯಶಸ್ಸು. ಅವರ ಮೇಲೆ ಸೇಡು ತೀರಿಸಿಕೊಳ್ಳಬಾರದೆನ್ನುವುದು ಪಕ್ವತೆ. ಯಶಸ್ಸಿನೊಂದಿಗೆ ಪಕ್ವತೆಯಿರಲಿ.
# ಪಂಚಾಂಗ : ಸೋಮವಾರ , 14-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಶಿಶಿರ ಋತು | ಮಾಘ ಮಾಸ | ಶುಕ್ಲ ಪಕ್ಷ | ತಿಥಿ: ಚತುರ್ದಶಿ| ನಕ್ಷತ್ರ: ಪುಷ್ಯಾ| ಮಳೆ ನಕ್ಷತ್ರ: ಧನಿಷ್ಠ
* ಸೂರ್ಯೋದಯ : ಬೆ.06.42
* ಸೂರ್ಯಾಸ್ತ : 06.26
* ರಾಹುಕಾಲ : 7.30-9.00
* ಯಮಗಂಡ ಕಾಲ :10.30-12.00
* ಗುಳಿಕ ಕಾಲ : 1.30-3.00
# ರಾಶಿಭವಿಷ್ಯ
ಮೇಷ: ಯಶಸ್ವಿಯಾಗುವ ಸಾಧ್ಯತೆಯಿದೆ. ವ್ಯಾಪಾರಸ್ಥರು ಹೆಚ್ಚು ಶ್ರಮಿಸಬೇಕಾಗುತ್ತದೆ.
ವೃಷಭ: ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರಿಗೆ ಇಂದು ಅತ್ಯುತ್ತಮವಾದ ದಿನ.
ಮಿಥುನ: ಪತ್ನಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮುಂದುವರಿಯುತ್ತವೆ.
ಕಟಕ: ಸರ್ಕಾರಕ್ಕೆ ಸಂಬಂಧಿಸಿದ ಕೆಲಸ- ಕಾರ್ಯ ಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುತ್ತೀರಿ.
ಸಿಂಹ: ಹೆಚ್ಚಿನ ಖರ್ಚು ಮಾಡುವುದನ್ನು ನಿಯಂತ್ರಿಸಿ.
ಕನ್ಯಾ: ಕೆಲಸದ ಹೊರೆ ಕಡಿಮೆಯಾಗುತ್ತದೆ. ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ.
ತುಲಾ: ಚಾತುರ್ಯದಿಂದ ಮಾತತುಗಳನ್ನಾಡುವುದ ರಿಂದ ಅಧಿಕ ಹಣ ಸಂಪಾದಿಸಬಹುದು.
ವೃಶ್ಚಿಕ: ಕಾಲುಗಳಲ್ಲಿ ನೋವು ಮತ್ತು ಸ್ನಾಯುಗಳ ಅಸ್ವಸ್ಥತೆ ಇರುತ್ತದೆ.
ಧನುಸ್ಸು: ಜಂಕ್ಫುಡ್ ತಿನ್ನುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ಮಕರ: ಹಿರಿಯ ಅಧಿಕಾರಿಗಳೊಂದಿಗೆ ಸಾಮರಸ್ಯ ಮತ್ತು ಸಂಘಟಿತ ಪ್ರಯತ್ನಗಳನ್ನು ಕಾಪಾಡಿಕೊಳ್ಳಿ.
ಕುಂಭ: ಮಕ್ಕಳಿಂದಾಗಿ ನೋವುಂಟಾಗಲಿದೆ. ತಂದೆಯ ಆರೋಗ್ಯವನ್ನು ನೋಡಿಕೊಳ್ಳಿ.
ಮೀನ: ಸಂಬಳ ಪಡೆಯುವವರು ಕೆಲವು ಲಾಭಗಳನ್ನು ಗಳಿಸುವ ಸಾಧ್ಯತೆಯಿದೆ.
