ನಿತ್ಯ ನೀತಿ : ದಡ್ಡರಿಗೆ ತಾವು ತುಂಬಾ ಬುದ್ಧಿವಂತರೆಂಬ ಭ್ರಮೆ ಇರುತ್ತದೆ. ಬುದ್ಧಿವಂತರಿಗೆ ತಾವೂ ದಡ್ಡರೇ ಎಂಬ ಅರಿವಿರುತ್ತದೆ.
# ಪಂಚಾಂಗ : ಭಾನುವಾರ , 20-02-2022
ಪ್ಲವನಾಮ ಸಂವತ್ಸರ | ಉತ್ತರಾಯಣ | ಶಿಶಿರ ಋತು | ಮಾಘ ಮಾಸ | ಕೃಷ್ಣ ಪಕ್ಷ | ತಿಥಿ: ಚತುರ್ಥಿ| ನಕ್ಷತ್ರ: ಹಸ್ತ| ಮಳೆ ನಕ್ಷತ್ರ: ಶತಭಿಷ
* ಸೂರ್ಯೋದಯ : ಬೆ.06.40
* ಸೂರ್ಯಾಸ್ತ : 06.27
* ರಾಹುಕಾಲ : 4.30-6.00
* ಯಮಗಂಡ ಕಾಲ : 12.00-1.30
* ಗುಳಿಕ ಕಾಲ :3.00-4.30
# ರಾಶಿಭವಿಷ್ಯ
ಮೇಷ: ಕೋಪ ನಿಯಂತ್ರಣದಲ್ಲಿದ್ದರೆ ಸಾಮಾಜಿಕ ಮಟ್ಟದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ.
ವೃಷಭ: ತಂದೆಯೊಂದಿಗಿನ ಸಂಬಂಧ ಸುಧಾರಿ ಸುತ್ತದೆ. ವ್ಯಾಪಾರ-ವ್ಯವಹಾರ ಕ್ಷೇತ್ರಗಳಲ್ಲಿ ನಿಮಗೆ ಉತ್ತಮ ಫಲಿತಾಂಶ ದೊರೆಯುವುದು.
ಮಿಥುನ: ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಯೋಗ ಧ್ಯಾನ ಮಾಡುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಿದೆ.
ಕಟಕ: ಕುಟುಂಬದ ವರೊಂದಿಗೆ ಏನಾದರೂ ವಿವಾದವಿದ್ದರೆ, ಸಂಭಾಷಣೆಯ ಮೂಲಕ ಬಗೆಹರಿಸಿಕೊಳ್ಳಬಹುದು.
ಸಿಂಹ: ವಿದ್ಯಾರ್ಥಿಗಳು ಏಕಾಗ್ರತೆಯ ಕೊರತೆಯಿಂದ ಓದಬೇಕಾಗುತ್ತದೆ.
ಕನ್ಯಾ: ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಬೀದಿ ಬದಿಯ ಆಹಾರ ಸೇವಿಸುವುದನ್ನು ತಪ್ಪಿಸಿದರೆ ಒಳ್ಳೆಯದು.
ತುಲಾ: ಮಾನಸಿಕ ಶಾಂತಿಗಾಗಿ ಏಕಾಂತದಲ್ಲಿ ಸಮಯ ಕಳೆಯಲು ಬಯಸುವಿರಿ.
ವೃಶ್ಚಿಕ: ಸಂಗಾತಿಯಿಂದ ನಿಮಗೆ ಆಶ್ಚರ್ಯಕರ ಉಡುಗೊರೆ ದೊರೆಯುವುದರಿಂದ ಸಂತಸವಾಗಲಿದೆ.
ಧನುಸ್ಸು: ವಿರೋಧಿಗಳಿಂದ ದೂರವಿರಿ. ಆರೋಗ್ಯದಲ್ಲೂ ಏರುಪೇರು ಉಂಟಾಗಬಹುದು.
ಮಕರ: ಅವಸರದಲ್ಲಿ ಯಾವುದೇ ನಿರ್ಧಾರ ಬೇಡ.
ಕುಂಭ: ಪತ್ನಿಯ ಸಹಾಯದಿಂದ ಹಣಕಾಸಿನ ವಿಷಯದಲ್ಲಿ ಸುಧಾರಣೆ ಕಂಡುಬರಲಿದೆ.
ಮೀನ: ಪ್ರೇಮ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ.
