ಸಾಲು ಸಾಲು ರಜೆಯ ಹಿನ್ನಲೆ ಕಾಫಿನಾಡಿನತ್ತ ಹರಿದುಬಂದ ಪ್ರವಾಸಿಗರು

ಚಿಕ್ಕಮಗಳೂರು, ಅ.13- ವಾರದ ಕೊನೆಯ ರಜೆ ದಿನಗಳು ಹಾಗೂ ಆಯುಧಪೂಜೆ, ದಸರಾ ಇದ್ದ ಕಾರಣ ಕಾಫಿ ನಾಡಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದರು. ಮುಳ್ಳಯ್ಯನಗಿರಿ, ದತ್ತಪೀಠ, ಕೆಮ್ಮಣ್ಣು ಗುಂಡಿ, ಶೃಂಗೇರಿ, ಹೊರನಾಡು ಪ್ರದೇಶಗಳಿಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬಂದ ಕಾರಣ ವಾಹನ ದಟ್ಟಣೆಯಲ್ಲಿ ಸಿಲುಕಿ ನರಳಿದರು. ಮುಳ್ಳಯ್ಯನಗಿರಿ , ದತ್ತಪೀಠ ಹಾಗೂ ಮಳೆಯಿಂದಾಗಿ ಚಂದ್ರದ್ರೋಣ ಪರ್ವತ ಶ್ರೇಣಿಯ ಸಾಲುಗಳು ಹಸಿರು ಹೊದ್ದು ಕಂಗೊಳಿಸುತ್ತಿವೆ. ಪ್ರಕೃತಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಸಾವಿರಾರು ವಾಹನಗಳಲ್ಲಿ ಜನರು ದಾಟಗುಡಿ ಇಟ್ಟಿದ್ದರು. … Continue reading ಸಾಲು ಸಾಲು ರಜೆಯ ಹಿನ್ನಲೆ ಕಾಫಿನಾಡಿನತ್ತ ಹರಿದುಬಂದ ಪ್ರವಾಸಿಗರು