ಬೆಂಗಳೂರು, ಜ.15- ಪೂರ್ವ ವಿಭಾಗದ ಗೋವಿಂದಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ 2 ಕೋಟಿ 51 ಲಕ್ಷ ಮೌಲ್ಯದ ಕೊಕೈನ್ ಹಾಗೂ ಬ್ರೌನ್ ಶುಗರ್ ವಶಪಡಿಸಿಕೊಂಡಿದ್ದಾರೆ. ಬ್ರೆಜಿಲ್ನಿಂದ ಕಳ್ಳಸಾಗಣೆ: ಬ್ರೆಜಿಲ್ನಿಂದ ಮಾದಕ ವಸ್ತು ಕೊಕೈನ್ಅನ್ನು ಕಳ್ಳಸಾಗಣೆ ಮುಖಾಂತರ ಬೆಂಗಳೂರಿಗೆ ತಂದು ಸೆಲಬ್ರೆಟಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು 1 ಕೋಟಿ 30 ಲಕ್ಷ ಮೌಲ್ಯದ 910 ಗ್ರಾಂ ಕೊಕೈನ್ ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಬ್ರೆಜಿಲ್ ದೇಶದಿಂದ ದೆಹಲಿಗೆ ಕಳ್ಳಸಾಗಣೆ ಮಾಡಿಕೊಂಡು ದೆಹಲಿಯಲ್ಲಿ ಕೊಕೈನ್ಅನ್ನು ಬೆಂಗಳೂರಿಗೆ ತಂದು ನಗರದಲ್ಲಿ ವಾಸವಾಗಿರುವ ನೈಜೀರಿಯಾ ದೇಶದ ಗಿರಾಕಿಗಳಿಗೆ, ಸೆಲಬ್ರೆಟಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದನು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ತನಿಖೆ ಕೈಗೊಂಡು ಎಚ್ಎಸ್ಆರ್ ಲೇಔಟ್, 4ನೆ ಬ್ಲಾಕ್ನ ಕೈಟ್ಸ್ ಸೀನಿಯರ್ ಕೇರ್, 1ನೆ ಹಂತ, 4ನೆ ಬ್ಲಾಕ್ನ ಫಾರೆಸ್ಟ್ ಕಚೇರಿ ಎದುರು ಹೆಣ್ಣೂರು ಬಂಡೆ ನಿವಾಸಿಯನ್ನು ಬಂಧಿಸಿ 910 ಗ್ರಾಂ ಕೊಕೈನ್, ವೇಯಿಂಗ್ ಮಿಷನ್, ಗೋಲ್ಡ್ ಮಾಡೆಲ್ ಎಂ ಹೆಸರಿನ ಚಿಕ್ಕ ಚಿಕ್ಕ ಖಾಲಿ ಕವರ್ಗಳು, ಹೋಂಡಾ ಡಿಯೋ ಬೈಕ್ ವಶಪಡಿಸಿಕೊಂಡಿದ್ದಾರೆ.
# 50 ಸಾವಿರ ಬಹುಮಾನ: ಅಧಿಕಾರಿ ಮತ್ತು ಸಿಬ್ಬಂದಿಗಳ ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಅವರು ಶ್ಲಾಘಿಸಿ 50 ಸಾವಿರ ಬಹುಮಾನ ಘೋಷಿಸಿದ್ದಾರೆ.
# ಬ್ರೌನ್ ಶುಗರ್ ವಶ:
ಮಾದಕ ವಸ್ತು ಬ್ರೌನ್ ಶುಗರ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ 1 ಕೋಟಿ 21 ಲಕ್ಷ ಮೌಲ್ಯದ 2 ಕೆಜಿ 428 ಗ್ರಾಂ ಬ್ರೌನ್ ಶುಗರ್ ವಶಪಡಿಸಿಕೊಂಡಿದ್ದಾರೆ. ನಾಗವಾರದ ವೈಯಾಲಿಕಾವಲ್, ಎಚ್ಬಿಸಿಎಸ್ ಲೇಔಟ್, 80 ಅಡಿ ರಸ್ತೆಯ ಇಂದಿರಾ ಕ್ಯಾಂಟಿನ್ ಬಳಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಈತನನ್ನು ಹೆಚ್ಚಿನ ವಿಚಾರಣೆಗೋಳಪಡಿಸಿದಾಗ ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಮಾದಕ ವಸ್ತು ಗಾಂಜಾವನ್ನು ಆಗಾಗ್ಗೆ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶ ರಾಜ್ಯಗಳಿಗೆ ಹೋಗಿ ಅಲ್ಲಿ ಗಾಂಜಾ ಮಾರಾಟಗಾರರನ್ನು ಸಂಪರ್ಕಿಸಿ ಅವರಿಂದ ಖರೀದಿಸಿ ಬೆಂಗಳೂರಿಗೆ ಕಳ್ಳಸಾಗಣೆ ಮಾಡಿಕೊಂಡು ಬಂದು ತನ್ನ ಗಿರಾಕಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದುದಾಗಿ ತಿಳಿಸಿದ್ದಾನೆ.
ತನಿಖೆ ಮುಂದುವರೆಸಿ ಎರಡು ತಂಡಗಳನ್ನಾಗಿ ವಿಂಗಡಿಸಿ ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರಿಸಿದ್ದರು.ಆರೋಪಿಯು ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯ ವರೂಡ್ ತಾಲ್ಲೂಕಿನಲ್ಲಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಅಲ್ಲಿಗೆ ತೆರಳಿ ಆರೋಪಿಯನ್ನು ಬಂಸಿ ಪ್ಲಾಸ್ಟಿಕ್ ಕವರ್ನಲ್ಲಿದ್ದ ಬ್ರೌನ್ಶುಗರ್ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದರ ಮೌಲ್ಯ 1 ಕೋಟಿ 21 ಲಕ್ಷ ರೂ. ಎಂಬುದು ಗೊತ್ತಾಗಿದೆ.
75 ಸಾವಿರ ಬಹುಮಾನ: ಅಕಾರಿ ಮತ್ತು ಸಿಬ್ಬಂದಿಗಳ ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಅವರು ಶ್ಲಾಘಿಸಿ 75 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.
