ರಜೆಗೆ ಸಂಬಂಧಿಕರ ಮನೆಗೆ ಬಂದಿದ್ದ ಬಾಲಕಿಯರಿಬ್ಬರು ನೀರಿನಲ್ಲಿ ಮುಳುಗಿ ಸಾವು

ಚಿಕ್ಕಬಳ್ಳಾಪುರ, ಜೂ.2- ಈಜಲು ತೆರಳಿದ್ದ ಮುಂಬೈ ಮೂಲದ ಬಾಲಕಿಯರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದಂಡಿಗನಹಳ್ಳಿ ಕೆರೆಯಲ್ಲಿ ನಡೆದಿದೆ.ಮುಂಬೈ ಮೂಲದ ಅಲಿಯಾ ಪಾಟೀಲ್‌ (14), ಜೋಯಾ ಪಾಟೀಲ್‌ (14) ಮೃತಪಟ್ಟ ದುರ್ದೈವಿಗಳು. ರಜೆಯ ಹಿನ್ನೆಲೆಯಲ್ಲಿ ಗೌರಿಬಿದನೂರಿನ ಸಂಬಂಧಿಕರ ಮನೆಗೆ ಬಂದಿದ್ದ ಬಾಲಕಿಯರು ಕುಟುಂಬ ಸಮೇತ ನಿನ್ನೆ ದಂಡಿಗನಹಳ್ಳಿ ಕೆರೆ ವೀಕ್ಷಣೆಗೆ ಆಗಮಿಸಿದ್ದು, ಬಾಲಕಿಯರು ಈಜಲು ಕೆರೆಗೆ ಇಳಿದಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿ ಇಬ್ಬರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕೆರೆ ಏರಿ ಮೇಲಿದ್ದ ಸಂಬಂಧಿಕರು ರಕ್ಷಿಸಲು ಹರಸಾಹಸ ಪಟ್ಟರೂ … Continue reading ರಜೆಗೆ ಸಂಬಂಧಿಕರ ಮನೆಗೆ ಬಂದಿದ್ದ ಬಾಲಕಿಯರಿಬ್ಬರು ನೀರಿನಲ್ಲಿ ಮುಳುಗಿ ಸಾವು