ಯುವಕನಿಗೆ ಚಾಕು ಇರಿದಿದ್ದ ಇಬ್ಬರ ಬಂಧನ

Social Share

ನವದೆಹಲಿ,ಫೆ.18- ಪಶ್ಚಿಮ ದೆಹಲಿ ಠಾಣೆ ವ್ಯಾಪ್ತಿಯ ಖಲ್ಯಾ ಪ್ರದೇಶದಲ್ಲಿ ಯುವಕನೊಬ್ಬನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಸಿದಂತೆ ದೆಹಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅನುಷ್(19) ಮತ್ತು ಬಂಟಿ(18) ಬಂಧಿತರು.
ವಿಷ್ಣುಗಾರ್ಡನ್ ನಿವಾಸಿಯಾದ ಸಂದೀಪ್ ಸೂರಿ ಎಂಬ ಯುವಕನೊಂದಿಗೆ ಈ ಇಬ್ಬರು ಆರೋಪಿಗಳು ದ್ವೇಷ ಬೆಳೆಸಿಕೊಂಡಿದ್ದರು. ರಣ್‍ಬೀರ್‍ನಗರದಲ್ಲಿರುವ ತನ್ನ ಸ್ನೇಹಿತ ಗೌರವ್‍ನನ್ನು ಭೇಟಿ ಮಾಡಲು ಬೈಕ್‍ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸಂದೀಪ್ ಸೂರಿ ಕೆಲವು ಸ್ಥಳೀಯ ಯುವಕರೊಂದಿಗೆ ಜಗಳವಾಡಿಕೊಂಡಿದ್ದನು.
ಈ ಜಗಳ ದ್ವೇಷಕ್ಕೆ ತಿರುಗಿದ್ದು, ನಂತರ ಈ ಯುವಕರ ಗುಂಪು ಆತನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿ ಪರಾರಿಯಾಗಿತ್ತು.
ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

Articles You Might Like

Share This Article