ಕಲ್ಯಾಣಮಂಟಪದಲ್ಲೇ ಮುರಿದುಬಿದ್ದ ಮದುವೆ..!

Social Share

ಲಖ್ನೋ,ಜ.28- ವರನ ವರ್ತನೆಯಿಂದ ಅಸಮಾಧಾನಗೊಂಡ ವಧು ಮದುವೆ ದಿನವೇ ವಿವಾಹವಾಗಲು ನಿರಾಕರಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಔರಿಯಾ ಜಿಲ್ಲೆಯ ಬಿಧುನಾ ಕೊಟ್ವಾಲಿಯ ನವೀನ್ ಬಸ್ತಿಯಲ್ಲಿ ಈ ಘಟನೆ ನಡೆದಿದೆ.
ವರ್ಮಲಾ ಸಮಾರಂಭದಲ್ಲಿ ವರ ಆಕಾಶ್ ತನಗೆ ನೀಡಿದ್ದ ಹೂವಿನ ಹಾರವನ್ನು ಎಸೆದಿದ್ದರಿಂದ ಮದುವೆ ಮನೆಯಲ್ಲಿ ಕೆಲಕಾಲ ಗದ್ದಲ ಉಂಟಾಗಿದೆ. ಘಟನೆಯ ನಂತರ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ.ಇದರಿಂದ ಅಸಮಾಧಾನಗೊಂಡ ವಧು, ತಾನು ಈ ಮದುವೆಯಾಗುವುದಿಲ್ಲ ಎಂದು ವರನನ್ನು ನಿರಾಕರಿಸಿದ್ದಾಳೆ. ವಧುವಿನ ನಿರ್ಧಾರಕ್ಕೆ ಸ್ಥಳದಲ್ಲಿದ್ದ ಜನರು ಬೆಚ್ಚಿಬಿದ್ದಿದ್ದಾರೆ.
ನೆರೆದಿದ್ದ ಜನ, ಸಂಬಂಧಿಕರು ವಧುವನ್ನು ಮದುವೆಯಾಗುವಂತೆ ಸಾಕಷ್ಟು ಮನವೊಲಿಸಲು ಪ್ರಯತ್ನ ನಡೆಸಿದ್ದಾರೆ. ಇದಕ್ಕೆ ಕಿವಿಗೊಡದ ವಧು ತನ್ನ ನಿರ್ಧಾರವನ್ನು ಬದಲಾಯಿಸಿಲ್ಲ.

Articles You Might Like

Share This Article