ಲಕ್ನೋ/ಹರಿದ್ವಾರ, ಅ. 12-, ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ಅಧಿಕಾರಿಗಳು ಭಾರತದಲ್ಲಿ ಅಲï-ಖೈದಾ ಮತ್ತು ಅದರ ಅಂಗಸಂಸ್ಥೆ ಜಮಾತ್-ಉಲ್-ಮುಜಾಹಿದ್ದೀನ್ನೊಂದಿಗೆ ಸಂಪರ್ಕ ಹೊಂದಿದ್ದ ಎಂಟು ಶಂಕಿತ ಭಯೋತ್ಪಾದಕರನ್ನು ಬಂಧಿಸಿದೆ.
ಎಂಟು ಮಂದಿಯನ್ನು ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ವಿವಿಧ ಸ್ಥಳಗಳಿಂದ ಬಂಧಿಸಲಾಗಿದೆ ಎಂದು ಯುಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಬಂಧಿತ ಶಂಕಿತರನ್ನು ಲುಕ್ಮಾನ್, ಮನೋಹರಪುರದ ಗಗಲ್ಹೆಡಿ ಕಾರಿ ಮುಖ್ತಾರ್ನ ಮೊಹಮ್ಮದ್ ಅಲಿಮ, ದಿಯೋಬಂದ್ನ ಕಾಮಿಲ, ಎಲ್ಲರೂ ಸಹರಾನ್ಪುರ ಜಿಲ್ಲಾಯವರು; ಶಾಮ್ಲಿ ಜಿಲ್ಲಾಯ ಜಿಂಜಾನಾದ ಶಹಜಾದ್ ಮತ್ತು ಹರಿದ್ವಾರದ (ಉತ್ತರಾಖಂಡ) ಮುದಾರ್ಸಿ, ಬಾಂಗ್ಲಾದೇಶಿ ಪ್ರಜೆ ಅಲಿ ನೂರ್ ಮತ್ತು ಜಾರ್ಖಂಡ್ನ ನವಾಜಿಶ್ ಅನ್ಸಾರಿ ಅವರನ್ನು ಸಹ ಬಂಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಶಂಕಿತರಿಂದ ಭಯೋತ್ಪಾದನೆ, ಧನಸಹಾಯ ಮತ್ತು ಜಿಹಾದಿ ಸಾಹಿತ್ಯದ ಎಲೆಕ್ಟ್ರಾನಿಕ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ ಅದು ಭಯೋತ್ಪಾದಕ ಸಂಘಟನೆಗಳೊಂದಿಗೆ ಅವರ ಸಂಬಂಧವನ್ನು ದೃಢೀಕರಿಸುತ್ತದೆ ಎಂದು ಹೇಳಿದ್ದಾರೆ.
ಮೊಬೈಲ್ ಫೋನ್ಗಳು, ಪೆನ್ ಡ್ರೈವ್ಗಳು ಮತ್ತು ಮೆಮೊರಿ ಕಾರ್ಡ್ಗಳು ಸೇರಿದಂತೆ ಹಲವು ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಬಾಂಗ್ಲಾದೇಶದ ಭಯೋತ್ಪಾದಕ ಅಬ್ದುಲ್ಲಾ ತಲ್ಹಾ ಭಯೋತ್ಪಾದಕ ನಿಧಿಗಾಗಿ ಕಳುಹಿಸಿದ್ದ ಎನ್ನಲಾದ 2.5 ಲಕ್ಷ ರೂಪಾಯಿ ಬಂದಿತ ಕಾಮಿಲ್ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.