Friday, March 29, 2024
Homeಜಿಲ್ಲಾ ಸುದ್ದಿಗಳುಗಣೇಶೋತ್ಸವ ಬ್ಯಾನರ್ ಹರಿದು ಹಾಕಿ , ದಾಂಧಲೆ ಮಾಡಿದ ಮೂವರ ಬಂಧನ

ಗಣೇಶೋತ್ಸವ ಬ್ಯಾನರ್ ಹರಿದು ಹಾಕಿ , ದಾಂಧಲೆ ಮಾಡಿದ ಮೂವರ ಬಂಧನ

ವಿಜಯಪುರ, ಸೆ.30: ಶಿವಾಜಿ ವೃತ್ತದ ಬಳಿ ಹಾಕಲಾಗಿದ್ದ ಗಣೇಶೋತ್ಸವದ ಬ್ಯಾನರ್‍ಗಳನ್ನು ಹರಿದು ಹಾಕಿ , ದಾಂಧಲೆ ನಡೆಸಿದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಶಾಸಕ ಬಸವರಾಜು ಪಾಟೀಲ್ ಯತ್ನಾಳ್, ಶಿವಾಜಿ , ಗಣೇಶನ ಚಿತ್ರ ಇರುವ ದೊಡ್ಡ ಬ್ಯಾನರ್ ಅನ್ನು ಹಾಕಲಾಗಿತ್ತು ಇದನ್ನು ಕಳೆದ 2 ದಿನಗಳ ಹಿಂದೆ ಕೆಲ ಕಿಡಿಗೇಡಿಗಳು ಹರಿದು ಹಾಕಿದರು. ಇದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಸದ್ಯದಲ್ಲೇ ಚುನಾವಣೆ ನಡೆಯಲಿರುವ ಪಂಚರಾಜ್ಯಗಳಲ್ಲಿ ಮೋದಿ ಮಿಂಚಿನ ಸಂಚಾರ

ಡಿಸಿ ಕಚೇರಿ ಬಳಿ ಬಿಜೆಪಿ ಪಾಲಿಕೆ ಸದಸ್ಯರು ಹಾಗೂ ಹಿಂದು ಪರ ಮುಖಂಡರು ಪ್ರತಿಭಟನೆ ನಡೆಸಿ ತಪ್ಪಿತಸ್ಥರ ಬಂಧನಕ್ಕೆ ಒತ್ತಾಯಿಸಿದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ವಿಜಯಪುರ ಪೊಲೀಸರು ಯಾಸಿನ್, ಮೊಹಮ್ಮದ್, ಸೋಯಲ್ ಎಂಬ ಮೂವರನ್ನು ಬಂಧಿಸಿದ್ದಾರೆ.

RELATED ARTICLES

Latest News