ಪಶ್ಚಿಮ ವಿಭಾಗ ಪೊಲೀಸರ ಕಾರ್ಯಾಚರಣೆ : 7 ಮಂದಿ ಸೆರೆ, 35.43 ಲಕ್ಷ ಮೌಲ್ಯದ ಬೈಕ್‍ಗಳ ವಶ

Social Share

ಬೆಂಗಳೂರು, ಫೆ.9- ನಗರದ ಪಶ್ಚಿಮ ವಿಭಾಗದ ಕೆಪಿ ಅಗ್ರಹಾರ ಠಾಣೆ, ಜೆಜೆ ನಗರ ಮತ್ತು ಚಂದ್ರಾ ಲೇಔಟ್ ಠಾಣೆ ಪೊಲೀಸರು ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಏಳು ಮಂದಿ ಆರೋಪಿಗಳನ್ನು ಬಂಸಿ 35.43 ಲಕ್ಷ ಬೆಲೆಯ 36 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಪಿ ಅಗ್ರಹಾರ: ದೇವಸ್ಥಾನಗಳ ಮುಂದೆ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದಂತಹ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಕೆಪಿ ಅಗ್ರಹಾರ ಠಾಣೆ ಪೊಲೀಸರು ಬಂಸಿ 25 ಲಕ್ಷ ಬೆಲೆಬಾಳುವ 21 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಹೊಸೂರಿನ ವೆಂಕಟೇಶ್, ಗೋಪಿ ಮತ್ತು ಬೊಮ್ಮಸಂದ್ರದ ನಂದೀಶ ಬಂತರು. ಫೆ.2ರಂದು ಸಂಜೆ 5 ಗಂಟೆಯಲ್ಲಿ ಪಿರ್ಯಾದುದಾರರು ತಮ್ಮ ಹೊಂಡಾ ಯೂನಿಕಾರ್ನ್ ಮೋಟಾರ್ ಬೈಕ್ ನಿಲ್ಲಿಸಿ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದರು.
ಈ ಬಗ್ಗೆ ಕೆಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‍ಸ್ಪೆಕ್ಟರ್ ಸದಾನಂದ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊದಲು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರು ನೀಡಿದ ಮಾಹಿತಿಯಂತೆ ಮತ್ತೊಬ್ಬ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಆರೋಪಿಗಳು ಕೆಪಿ ಅಗ್ರಹಾರ, ಅನ್ನಪೂರ್ಣೇಶ್ವರಿ ನಗರ, ವಿಜಯನಗರ, ಬ್ಯಾಡರಹಳ್ಳಿ, ಸಿಕೆ ಅಚ್ಚುಕಟ್ಟು, ಹೆಬ್ಬಗೋಡಿ, ಮಾಲೂರು, ಸರ್ಜಾಪುರ, ವರ್ತೂರು, ಸೂರ್ಯನಗರ ಹಾಗೂ ಚನ್ನಪಟ್ಟಣ, ಮೈಸೂರು ಜಿಲ್ಲೆಯ ಕೃಷ್ಣರಾಜ ಪೊಲೀಸ್ ಠಾಣೆ ಸರಹದ್ದಿನಲ್ಲಿ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ 21 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಕೆಪಿ ಅಗ್ರಹಾರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಜೆಜೆ ನಗರ: ಮೂವರ ಬಂಧನ: ಮನೆ ಮುಂಭಾಗ ನಿಲ್ಲಿಸಲಾಗಿದ್ದ ಪಲ್ಸರ್ ಬೈಕ್‍ಅನ್ನು ಕಳವು ಮಾಡಿದ್ದ ಮೂವರನ್ನು ಜೆಜೆ ನಗರ ಠಾಣೆ ಪೊಲೀಸರು ಬಂಧಿಸಿ 5.20 ಲಕ್ಷ ಬೆಲೆಯ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಜಂಗ್ಲಿ ಮುಬಾರಕ್, ಸಾದಿಕ್, ಜಬೀರ್ ಬಂಧಿತ ದ್ವಿಚಕ್ರ ವಾಹನ ಕಳ್ಳರು. ಡಿ.30ರಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ಪಿರ್ಯಾದುದಾರರು ತಮ್ಮ ಮನೆ ಮುಂದೆ ಬಜಾಜ್ ಪಲ್ಸರ್ ಬೈಕ್ ನಿಲ್ಲಿಸಿದ್ದಾಗ ಕಳ್ಳರು ಕಳವು ಮಾಡಿದ್ದರು.  ಈ ಬಗ್ಗೆ ಜೆಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇನ್‍ಸ್ಪೆಕ್ಟರ್ ಮಂಜು ಮತ್ತು ಸಿಬ್ಬಂದಿ ತನಿಖೆ ಕೈಗೊಂಡು ಮೊದಲು ಇಬ್ಬರನ್ನು ಬಂಸಿ ನಂತರ ಮತ್ತೊಬ್ಬನನ್ನು ಪತ್ತೆಹಚ್ಚಿ ಬಂಧಿಸಿ ವಿಚಾರಣೆಗೊಳಪಡಿಸಿದರು. ಆರೋಪಿಗಳು ಜೆಜೆ ನಗರ, ಎಸ್‍ಜೆ ಪಾರ್ಕ್, ಇಂದಿರಾನಗರ, ಮತ್ತು ಕುಮಾರ ಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನಗಳ ಹ್ಯಾಂಡ್‍ಲಾಕ್‍ಗಳನ್ನು ಮುರಿದು ಕಳವು ಮಾಡಿ ಮಾರಾಟ ಮಾಡಿರುವುದಾಗಿ ತಿಳಿಸಿದ ಮೇರೆಗೆ 5.20 ಲಕ್ಷ ಬೆಲೆಯ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಜೆಜೆ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಂದ್ರಾ ಲೇಔಟ್: ಸಂಬಂಕರ ಮನೆ ಮುಂದೆ ಬೈಕ್ ನಿಲ್ಲಿಸಿ ಊರಿಗೆ ಹೋಗಿದ್ದ ಪಿರ್ಯಾದುದಾರರ ಬೈಕ್ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಸಿ 5.23 ಲಕ್ಷ ಬೆಲೆಯ ಎಂಟು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಲತಃ ತಮಿಳುನಾಡಿನ ವಿಜಯ್ ಬಂತ ಆರೋಪಿ. ಚಂದ್ರಾ ಲೇಔಟ್‍ನಲ್ಲಿ ವಾಸವಾಗಿದ್ದ. ಆತ ಆನೇಕಲ್, ಅತ್ತಿಬೆಲೆ ಕಡೆಗಳಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದನು. ರಾತ್ರಿ ವೇಳೆ ಮನೆಗಳ ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ. ಕಳೆದ ಮೇ 29ರಂದು ಪಿರ್ಯಾದುದಾರರು ತಮ್ಮ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನವನ್ನು ಸಂಬಂಕರ ಮನೆ ಬಳಿ ನಿಲ್ಲಿಸಿ ಹೋಗಿದ್ದಾಗ ಕಳ್ಳತನವಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಇನ್‍ಸ್ಪೆಕ್ಟರ್ ಮನೋಜ್ ಹೂವಳೆ ಹಾಗೂ ಸಿಬ್ಬಂದಿ ತನಿಖೆ ನಡೆಸಿ ಆರೋಪಿಯೊಬ್ಬನನ್ನು ಬಂಸಿ ವಿಚಾರಣೆ ನಡೆಸಿ ವಿವಿಧ ಬೈಕ್ ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ. ಆರೋಪಿಯು ಚಂದ್ರಾ ಲೇಔಟ್, ವಿಜಯನಗರ, ಚಾಮರಾಜಪೇಟೆ, ಬ್ಯಾಟರಾಯನಪುರ, ಕೋಲಾರ ಜಿಲ್ಲೆಯ ಮಾಲೂರು ಪೆÇಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕಳವು ಮಾಡಿದ್ದ ಸುಮಾರು 5.23 ಲಕ್ಷ ರೂ. ಬೆಲೆಯ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Articles You Might Like

Share This Article